ಕಲಬುರಗಿ:– ಕಿಕ್ಕಿರಿದು ತುಂಬಿದ್ದ ಜಾತ್ರೆಯಲ್ಲಿ ತೇರು ಎಳೆಯುವ ವೇಳೆ ರಥದ ಚಕ್ರಕ್ಕೆ ಸಿಲುಕಿ ಹೋಂಗಾರ್ಡ್ ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಶರಣಬಸವೇಶ್ವರ ಜಾತ್ರೋತ್ಸವದಲ್ಲಿ ಘಟನೆ ಸಂಭವಿಸಿದ್ದು ಬೀದರ್ ಮೂಲದ ಹೋಂಗಾರ್ಡ್ ರಾಮು(28) ಮೃತ ದುದೈವಿ ಅಂತ ಗುರುತಿಸಲಾಗಿದೆ..
ಮತ್ತೋರ್ವ ಸಿಬ್ಬಂದಿ ಅಶೋಕ ರೆಡ್ಡಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೇರು ಎಳೆಯುವ ವೇಳೆ ಗದ್ದಲದಲ್ಲಿ ಅವಘಡವಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ..
ಇಂದಿನಿಂದ ಶುರುವಾದ ಜಾತ್ರಾ ಮಹೋತ್ಸವದಲ್ಲಿ ಇಂದು ರಥೋತ್ಸವ (ಉಚ್ಛಾಯಿ) ನಾಳೆ ಮಹಾ ರಥೋತ್ಸವ ಜರುಗಲಿದೆ..ಆರ್ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..