ಎರಡು ಬಣದವರು ಒಟ್ಟಾಗಿ ಕೆಲಸ ಮಾಡುತ್ತೇವೆ. ಯಾರಿಗಾದರು ಟಿಕೆಟ್ ಕೊಡಿ ಅಂತ ರಮೇಶ್ ಕುಮಾರ್ ಹೇಳಿದ್ದರು. ವೇಣುಗೋಪಾಲ್, ಸುರ್ಜೆವಾಲ, ಖರ್ಗೆ ಅವರು ಸಮಚಿತ್ತದಿಂದ ತೋರಿದ್ದಾರೆ. ನಾವು ಚಿಕ್ಕಬಳ್ಳಾಪುರ ಹಾಗೂ ಕೋಲಾರ ಗೆಲ್ಲಬೇಕು. ಸಿಎಂ, ಡಿಸಿಎಂಗೂ ನಾನು ಮನವಿ ಮಾಡಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಬ್ಬರನ್ನೂ ಒಪ್ಪಲ್ಲ. ಸೋಲಲಿ ಅಥವಾ ಗೆಲ್ಲಲಿ ಬೇರೆ ಕ್ಯಾಂಡಿಡೇಟ್ ಕೊಡ್ತೀವಿ ಎಂದು ಕೈ ತೊಳೆದುಕೊಳ್ಳುವುದು ಸರಿಯಲ್ಲ. ಅವರದು ಬೇಡ, ನಿಮ್ಮದು ಬೇಡ ಅಂದರೆ ಬಂದವರಿಗೆ ಕಷ್ಟ ಆಗುತ್ತೆ. ಪಾಪ ಅವರನ್ನ ಕಷ್ಟಕ್ಕೆ ಸಿಲುಕಿಸುವುದು ಬೇಡ ಎಂದು ಎಚ್ಚರಿಕೆ ಮಾತನಾಡಿದರು.
ಒಮ್ಮತದ ಅಭ್ಯರ್ಥಿ ಆದರೆ ಎಲ್ಲರೂ ಸೇರಿ ಕೆಲಸ ಮಾಡಬಹುದು. ನಾನು ಅಘಾದವಾದ ನೋವಲ್ಲಿ ಇದ್ದೇನೆ. ಆದರೆ ಪಕ್ಷ ಮುಖ್ಯ. ಎಡಗೈ ಬಲಗೈ ಎಲ್ಲ ಇಲ್ಲ. ಎಲ್ಲಾ ವರ್ಗದ ಜನ ವೋಟ್ ಹಾಕಿದ್ದಕ್ಕೆ 30 ವರ್ಷ ಪಾರ್ಲಿಮೆಂಟ್ಗೆ ಹೋಗಿದ್ದೇನೆ ನಾನು. ಅವರು ಯಾರಿಗೆ ಕೊಟ್ಟರೂ ಒಪ್ಪಿಕೊಳ್ಳುತ್ತೇನೆ. ನನ್ನ ಸಮುದಾಯ ಕಟ್ಟಿಕೊಂಡು ಹಣೆಬರಹ ಬರೆದುಕೊಳ್ಳೋಕೆ ಆಗಲ್ಲ. ಯಾವುದೇ ಸಮುದಾಯಕ್ಕೆ ಟಿಕೆಟ್ ಕೊಟ್ರೂ ಒಪ್ಪಿಕೊಳ್ಳುವೆ. ಆದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್ಗೆ ವೋಟ್ ಕೇಳಬೇಕು ಎಂದು ಹೇಳಿದರು