ಬೆಂಗಳೂರು: ಸರ್ಕಾರಿ ಮತ್ತು ನ್ಯಾಯಾಲಯದ ನಡುವಿನ ಹಗ್ಗ ಜಗ್ಗಾಟದ ನಡುವೆಯೇ 5, 8 ಮತ್ತು 9 ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲಾಗಿದೆ . ಈ ನಡುವೆ ಮೂರೂ ತರಗತಿಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಬರೆದ 1 ಕೋಟಿಗೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಕೇವಲ 3 ದಿನ ಕಾಲಾವಕಾಶ ನೀಡುವ ಮೂಲಕ ಶಿಕ್ಷಣ ಇಲಾಖೆ ತನ್ನ ಗುಣಮಟ್ಟವನ್ನು ಜಗಜ್ಜಾಹೀರುಗೊಳಿಸಿದೆ.
ಯೆಸ್.. ಒಂದೆಡೆ SSLC ಪರೀಕ್ಷೆ, ಮತ್ತೊಂದೆಡೆ ೫,೮,೯ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ.. ಇದರ ನಡುವೆ ಶಿಕ್ಷಕರ ಕಣ್ಣೀರು.. ಮೂರು ದಿನಗಳಲ್ಲಿ ಮೌಲ್ಯಮಾಪನ ಮುಗಿಸಿ SATS ನಲ್ಲಿ ಅಪ್ಲೋಡ್ ಮಾಡುವಂತೆ ಶಿಕ್ಷಣ ಇಲಾಖೆಯು ಹೊರಡಿಸಿರುವ ಆದೇಶಕ್ಕೆ ಶಿಕ್ಷಕರು ಮತ್ತು ಖಾಸಗಿ ಶಾಲಾ ಮಂಡಳಿಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಸ್ನೇಹಿತರ ನಡುವೆ ಹುಡುಗಾಟ : ಕರಳು ಬ್ಲಾಸ್ಟ್ ಆಗಿ ಸಾವಿನ ಮನೆ ಸೇರಿದ ಯುವಕ
ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಶಿಕ್ಷಕರಿಗೆ ಈ ಮೌಲ್ಯಮಾಪನಕ್ಕೆ ಯಾವುದೇ ಸಂಭಾವನೆಯನ್ನೂ ನೀಡುತ್ತಿಲ್ಲ. ಜೊತೆಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಒತ್ತಡದಲ್ಲಿರುವ ಶಿಕ್ಷಕರ ಮೇಲೆ ವೃಥಾ ಈ ಹೊಣೆಗಾರಿಕೆ ಹೇರಲಾಗಿದೆ ಎಂದು ಲೋಕೇಶ್ ತಾಳಿಕಟ್ಟೆ ವಾಗ್ದಾಳಿ ನಡೆಸಿದ್ದಾರೆ.
ಯೆಸ್, ಹಲವಾರು ವಿರೋಧ ಕೇಳಿದ ಬೆನ್ನಲ್ಲೇ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ ಶಿಕ್ಷಕರು ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ.. ಶಿಕ್ಷಕರು ದಿನವೊಂದಕ್ಕೆ 5ನೇ ತರಗತಿಯ 80, 8ನೇ ತರಗತಿಯ 60 ಮತ್ತು 9ನೇ ತರಗತಿಯ 40 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕೆಂದು ಸೂಚಿಸಲಾಗಿತ್ತು. ಅದನ್ನು ಪರಿಸ್ಕರಿಸಲಾಗಿದ್ದು, 8ನೇ ತರಗತಿಯ 50, 9ನೇ ತರಗತಿಯ 30 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಂತೆ ತಿಳಿಸಲಾಗಿದೆ.( ಅದೇಶ ಪತ್ರ ಬಳಸಿ)
ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ 1 ಕೊಠಡಿ ಮೇಲ್ವಿಚಾರಣ ಕಾರ್ಯ ಮತ್ತು ಚುನಾವಣೆ ಕಾರ್ಯನಿರ್ವಹಿಸಬೇಕಿರುವುದರಿಂದ ಯಾವುದೇ ವಿಳಂಬಕ್ಕೆ ಆಸ್ಪದವಾಗದಂತೆ ನಿಗದಿತ ಕಾಲಾವಧಿಯಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಬೇಕಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಲಾಗಿದೆ.
ಒಟ್ಟಾರೆ ಹಲವಾರು ಗೊಂದಲದಲ್ಲಿ ವಿಧ್ಯಾರ್ಥಿಗಳು ಪರೀಕ್ಷೆ ಬರೆದರೂ ಕೂಡ ಇದರ ಸಮಸ್ಯೆ ಗಳು ಬಗೆಹರೆಯದಿಲ್ಲ.. ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲೂ ಸಮಸ್ಯೆ ಮುಂದುವರೆದಿದ್ದೂ , ಸಾಕಷ್ಟು ವಿರೋಧದ ನಡುವೆ ಇದೀಗ ಶಿಕ್ಷಕರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲದೆ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದ ಎಂದು ಕಾದುನೋಡಬೇಕಿದೆ.