ಬೆಂಗಳೂರು: ಮಾ.1 ರಂದು ಐಟಿಪಿಎಲ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಉಗ್ರರ ಕೃತ್ಯ ಎನ್ನುವುದು ಬಯಲಾಗಿತ್ತು. ಆದರೆ ಕೃತ್ಯ ಎಸಗಿದವರು ಮಾತ್ರ ಪತ್ತೆ ಇರಲಿಲ್ಲ. ಸತತ ಹಲವು ದಿನಗಳ ಕಾರ್ಯಾಚರಣೆ ಬಳಿಕ ಉಗ್ರ ಗುಂಪಿನ ಸಂಚುಕೋರನನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಜಾಮಿಲ್ ಷರೀಫ್ ಬಂಧಿತ ವ್ಯಕ್ತಿ.
ಸ್ನೇಹಿತರ ನಡುವೆ ಹುಡುಗಾಟ : ಕರಳು ಬ್ಲಾಸ್ಟ್ ಆಗಿ ಸಾವಿನ ಮನೆ ಸೇರಿದ ಯುವಕ
ಬಂಧಿತ ಮುಜಾಮಿಲ್ ಷರೀಫ್ 7 ದಿನ ಎನ್ಐಎ ಕಸ್ಟಡಿಗೆ ನಿನ್ನೆ NIA ವಿಶೇಷ ಕೋರ್ಟಿಗೆ ಹಾಜರುಪಡಿಸಿದ್ದ ಅಧಿಕಾರಿಗಳು ಏಪ್ರಿಲ್ 3ರವರೆಗೂ ಎನ್ಐಎ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮಿಲ್ ಬಾಂಬರ್ಗೆ ಸಹಾಯ ಮಾಡಿದ್ದ ಆರೋಪಿ ಮುಜಾಮಿಲ್ ಷರೀಫ್
ಮುಜಾಮಿಲ್ ಷರೀಫ್ ಸ್ಪೋಟಕ್ಕೆ ಬೇಕಾದ ವಸ್ತುಗಳು ಹಾಗೂ ಬೇಕಾದ ಸಹಾಯವನ್ನು ದುಷ್ಕೃತ್ಯ ಎಸಗಿದವರಿಗೆ ಸರಬರಾಜು ಮಾಡಿದ್ದ ಎನ್ನಲಾಗಿದೆ. ಈತ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿನ ಬಸವೇಶ್ವರ ನಗರದ ಹೋಟಲ್ನಲ್ಲಿ ಕೆಲಸ ಮಾಡುತ್ತಿದ್ದ.
ಎನ್ಐಎ ನಡೆಸಿದ ತನಿಖೆ ವೇಳೆ ಮುಜಾಮಿಲ್ ಷರೀಫ್, ಬಾಂಬ್ ಸ್ಫೋಟಕ್ಕೆ ನೆರವು ನೀಡಿದ್ದವನ ಜೊತೆ ಸತತ ಸಂಪರ್ಕದಲ್ಲಿದ್ದ ಎಂಬುದು ದೃಢಪಟ್ಟಿದೆ. ಹಲವೆಡೆ ಎನ್ಐಎ ದಾಳಿ ನಡೆಸಿ ಪರಿಶೀಲಿಸುತ್ತಿದ್ದು, ಷರೀಫ್ನ ಕಂಪ್ಯೂಟರ್, ಲ್ಯಾಪ್ಟಾಪ್ ಪರಿಶೀಲಿಸಿದಾಗ ರೂವಾರಿಗಳಿಗೆ ಈತ ಸಹಕಾರ ನೀಡಿರುವುದು ಬೆಳಕಿಗೆ ಬಂದಿದೆ.