ಬೆಂಗಳೂರು: ಲೋಕಸಭಾ ಚುನಾವಣೆ- 2024 ಕ್ಕೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಎಸ್ ನಾಯಕರು ಒಗ್ಗಟ್ಟಿನ ಪ್ರದರ್ಶನ ಮಾಡಲು ಸಮನ್ವಯ ಸಭೆಯನ್ನು ನಡೆಸಿದ್ದಾರೆ . ಈ ವೇಳೆ ಲೋಕಸಭಾ ಚುನಾವಣೆಯನ್ನು ಒಟ್ಟಿಗೆ ಎದುರಿಸೋ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.
ಮೋದಿ ಬಿಟ್ಟರೆ ದೇಶಕ್ಕೆ ಇನ್ಯಾರೂ ಒಳ್ಳೆಯ ನಾಯಕರಿಲ್ಲ: ಎಚ್.ಡಿ.ದೇವೇಗೌಡ!
ಸಮನ್ವಯ ಸಭೆಯನ್ನು ನಗರದ ರೇಡಿಸನ್ ಬ್ಲೂ ಹೋಟೆಲ್ನಲ್ಲಿ ಏರ್ಪಾಡಿಸಲಾಗಿದ್ದು ಇದೇ ವೇಳೆ ಪ್ರಮುಖವಾಗಿ ಬಿಜೆಪಿ, ಜೆಡಿಎಸ್ ಯುವ ನಾಯಕರು ಒಟ್ಟಿಗೆ ಕೈ ಕುಲುಕುತ್ತಾ ಕಾಲ ಕಳೆದಿದ್ದು ವಿಶೇಷವಾಗಿತ್ತು ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಜೊತೆ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದು ಮಾತ್ರ ಇನ್ನೊಂದು ವಿಶೇಷವಾಗಿತ್ತು.
ಅಂದಹಾಗೆ ಬಿ.ವೈ ವಿಜಯೇಂದ್ರ ಅವರಿಗೂ ಜೆಡಿಎಸ್ ಪಕ್ಷದ ಶಾಲು ನೀಡುವ ಮೂಲಕ ಎರಡೂ ಪಕ್ಷದ ನಾಯಕರು ತಮ್ಮಲ್ಲಿ ಎಷ್ಟು ಸಮನ್ವಯತೆ ಇದೆ ಅನ್ನೋದನ್ನ ಸಾರಿದರು.
ಬಿಜೆಪಿ, ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಹೆಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ