ಬಳ್ಳಾರಿ: ಜೈ ಶ್ರೀ ರಾಮ್ ಎನ್ನುವ ಇವರು ಮಾರೆಮ್ಮ, ದುರ್ಗಮ್ಮ, ಪಾಂಡುರಂಗ ದೇವರಿಗೆ ಯಾಕೆ ಜೈಕಾರ ಹಾಕುವುದಿಲ್ಲ. ಯಾಕೆ ವೋಟು ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ.?ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. ಸಂಡೂರು ಸಮೀಪದ ಕೃಷ್ಣಾನಗರದ ಶಾಸಕರ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆ ಪೂರ್ವಬಾವಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇನ್ನೂ ಸಭೆಯಲ್ಲಿ ಚುನಾವಣೆಯಲ್ಲಿ ಅವರು ಹಣ ಕೊಡ್ತಾರೆ, ನಾವು ಕೊಡ್ತೇವೆ, ಮತದಾರರು ಮಾತ್ರ ಎಚ್ಚರಿಕೆಯಿಂದ ಮತ ಚಲಾವಣೆ ಮಾಡಬೇಕು ಎಂದು ಚುನಾವಣೆ ಪ್ರಚಾರದ ವೇಳೆ ಸಚಿವ ಸಂತೋಷ ಲಾಡ್ ಹಣ ಹಂಚಿಕೆ ಬಗ್ಗೆ ಬಹಿರಂಗ ಮಾತುಗಳಾನ್ನಾಡಿದರು. ಇದೇ ವೇಳೆ ಇ.ತುಕರಾಮ್ ಅವರನ್ನು ಲೋಕಸಭೆಗೆ ಆಯ್ಕೆ ಮಾಡಲು ಶ್ರಮಿಸುವಂತೆ ವಿನಂತಿಸಿದರು.