ಸಂಡೂರು:- ಬಿಜೆಪಿ ಸರ್ಕಾರ ದೇಶವನ್ನು ಹಾಳು ಮಾಡಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಸ್ವಿಸ್ ಬ್ಯಾಂಕಿನಿಂದ ಕಪ್ಪುಹಣ ತರುವುದು, ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿ. ರೈತರ ಸಾಲ ಮನ್ನಾ ಮುಂತಾದ ಆಶ್ವಾಸನೆಗಳ ಮೂಲಕ 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹತ್ತು ವರ್ಷದಲ್ಲಿ ದೇಶವನ್ನು ಹಾಳು ಮಾಡಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು
ಸಂಡೂರು ಸಮೀಪದ ಕೃಷ್ಣಾನಗರದ ಶಾಸಕರ ಕಚೇರಿ ಆವರಣದಲ್ಲಿ ಲೋಕಸಭೆ ಚುನಾವಣೆ ಪೂರ್ವಬಾವಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು
2014 ರವರೆಗೆ ಸುಮಾರು 16 ಪ್ರಧಾನಿಗಳ ಆಳ್ವಿಕೆಯಲ್ಲಿ ದೇಶದ ಸಾಲ 55 ಲಕ್ಷ ಕೋಟಿ ಇತ್ತು. ಮೋದಿ ಪ್ರಧಾನಿಯಾದ ನಂತರ 173 ಲಕ್ಷ ಕೋಟಿಗೆ ಮುಟ್ಟಿದೆ. ನೋಟು ಅಮಾನಿಕರಣದ ಸಮಯದಲ್ಲಿ 103 ಜನ ಬಡವರು ಪ್ರಾಣ ಕಳೆದುಕೊಂಡರು. 15 ಲಕ್ಷದ 50 ಸಾವಿರ ಕೋಟಿ ಬ್ಯಾಂಕ್ ಗೆ ಹೋದರೆ ಅದನ್ನು ಶೇಕಡ 12 ಬಡ್ಡಿ ದರದಲ್ಲಿ ಬಂಡವಾಳ ಶಾಹಿಗಳಿಗೆ ಸಾಲ ನೀಡಿದರು. ಯಾವೊಬ್ಬ ಯುವಕರಿಗೂ ಅದರಿಂದ ಉಪಯೋಗ ಆಗಲಿಲ್ಲ.4 ವರ್ಷದಿಂದ 2000 ಮುಖಬೆಲೆಯ ನೋಟುಗಳು ಚಾಲ್ತಿಯಲ್ಲಿಲ್ಲ ಎಂದು ಟೀಕಿಸಿದರು
ಜೈ ಶ್ರೀ ರಾಮ್ ಎನ್ನುವ ಇವರು ಮಾರೆಮ್ಮ, ದುರ್ಗಮ್ಮ, ಪಾಂಡುರಂಗ ದೇವರಿಗೆ ಯಾಕೆ ಜೈಕಾರ ಹಾಕುವುದಿಲ್ಲ. ಯಾಕೆ ವೋಟು ಸಿಗುವುದಿಲ್ಲ ಎಂಬ ಕಾರಣಕ್ಕಾಗಿಯೇ.?ಎಂದು ಪ್ರಶ್ನಿಸಿದರು.
ದನದ ಮಾಂಸದ ರಪ್ತಿನಲ್ಲಿ ದೇಶ 2ನೇ ಸ್ಥಾನದಲ್ಲಿದೆ ಆದರೂ ಗೋರಕ್ಷಕರು ಎನ್ನುತ್ತಾರೆ. ಜಾತಿದರ್ಮದ ವಿಷ ಬೀಜ ಬಿತ್ತುವ ಇವರು ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂಬ ಮಾತುಗಳನ್ನೂ ಅಡುತ್ತಿದ್ದಾರೆ ಬಾಂಗ್ಲಾದಷ್ಟು ತಲಾದಾಯವಿಲ್ಲ, ಅಪಘಾನಿಸ್ಥಾನದಷ್ಟು ಹಣದ ಮೌಲ್ಯವಿಲ್ಲ. ಮಾತೆತ್ತಿದರೆ ಇಡಿ, ಸಿಬಿಐ ಅವರನ್ನು ಬಳಸಿಕೊಳ್ಳುವ ಮೋದಿ ಸರ್ಕಾರವನ್ನು ಕಿತ್ತೊಗೆಯಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು
ಇದೇ ವೇಳೆ ಇ.ತುಕರಾಮ್ ಅವರನ್ನು ಲೋಕಸಭೆಗೆ ಆಯ್ಕೆ ಮಾಡಲು ಶ್ರಮಿಸುವಂತೆ ವಿನಂತಿಸಿದರು.