ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಹಾಗೂ ಜೆಡಿ ಎಸ್ ಮೈತ್ರಿ ಹಾಲಲ್ಲಿ ಸಕ್ಕರೆ ಆಗಬೇಕು ಹೊರತು ಹಾಲಲ್ಲಿ ಉಪ್ಪು ರೀತಿಯಲ್ಲಿ ಆಗಬಾರದು ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಬಿಜೆಪಿ- ಜೆಡಿಎಸ್ ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸುಳ್ಳು ಕಾಂಗ್ರೆಸ್ ನ ಹಾಗೂ ಕಳ್ಳ ಕಾಂಗ್ರೆಸ್ ರಿಗರನ್ನ ಹೊರಹಾಬೇಕಾಗಿದ್ದು, ದೇವೆಗೌಡರ ಅವರ ಛಲವನ್ನ ಮೆಚ್ಚಲೇಬೇಕಾಗಿದೆ. ಈಗಾಲೂ ಪಾರ್ಟಿ ಕಟ್ಟುತ್ತೇನೆ ಎಂದು ಹೋರಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನ ಪಾಲಿಸುತ್ತಿಲ್ಲಕಾಂಗ್ರೆಸ್ ಪಾರ್ಟಿ ಅಂದ್ರೆ ಭ್ರಷ್ಟಾಚಾರ ,ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್ ಪಾರ್ಟಿ 12 ಲಕ್ಷ್ ಕೋಟಿ ಭ್ರಷ್ಠಾಚಾರವನ್ನ ಹಿಂದೆ ಯುಪಿಎ ಸರ್ಕಾರ ಮಾಡಿತ್ತು
ಯುಪಿಎ ಹತ್ತು ವರ್ಷದಲ್ಲಿ ಇದ್ದಾಗ ನಮ್ಮ ದೇಶ ಇಪ್ಪತ್ತು ವರ್ಷ ಹಿಂದಕ್ಕೆ ಹೋಗಿತ್ತುಕಾಂಗ್ರೆಸ್ ನಲ್ಲಿ ಹಾಗೇ ಇದೆ ಯಾರಿಗೆ ಅಧಿಕಾರ ಇತ್ತು ಅವರು ಜವಾಬ್ದಾರಿ ಇರಲಿಲ್ಲಾ ಯಾರಿಗೆ ಜವಾಬ್ದಾರಿ ಇತ್ತು ಅವರಿಗೆ ಅಧಿಕಾರ ಇರಲಿಲ್ಲಾ ಇದು ಕಾಂಗ್ರೆಸ್ ನ ಸ್ಥಿತಿಯಾಗಿದೆವಾಜಪೇಯಿ ಅವರು ಬರುವವರೆಗೂ 4 ಲೈನ್ ರೋಡ್ ಇರಲಿಲ್ಲಾ ವಾಜಪೇಯಿ ಬಂದ ನಂತರ 4 ಲೈನ್ ರೋಡ್ ಆಗಿದೆ.. ಮೋದಿ ಸರ್ಕಾರಕ್ಕೂ ಬೇರೆ ಸರ್ಕಾರಕ್ಕೆ ವ್ಯತ್ಯಾಸ ಎನು ಅಂದ್ರೆ ಮೊದಲು ನಾನು 2004 ರಲ್ಲಿ ಸಂಸದ ಆದಾಗ ರಸ್ತೆ ಬಗ್ಗೆ ಪತ್ರ ಬರೆದ್ರೆ ಅದಕ್ಕೆ ಅವರು ರೋಡ್ ಆಗಲು ಡೆನ್ಸಿಟಿ ಅಷ್ಟು ಬರೋದಿಲ್ಲಾ ಅಂತ ಬರೆದು ಕೊಟ್ರು
ನಮ್ಮ ಸರ್ಕಾರದಲ್ಲಿ ನಾವು ಕೊಟ್ಟ ಪತ್ರಕ್ಕೂ ಹಾಗೇ ಅಧಿಕಾರಿಗಳು ಬರೆದುಕೊಟ್ಟಿದ್ರ ಆದ್ರೆ ನಾನು ಗಡ್ಕರಿ ಅವರಿಗೆ ಮನವಿ ಮಾಡಿ 4 ಲೈನ್ ರಸ್ತೆ ಮಾಡಿಸಿಕೊಂಡು ಬಂದೆ ನಮ್ಮ ಗದಗ ರಸ್ತೆಯಿಂದ ದೇಶದ ಎಲ್ಲಾ ರಸ್ತೆಗಳು ಬದಲಾವಣೆಯಾಗಿವೆ ಎಲ್ಲಿ ರಸ್ತೆ ನೀರು ವಿದ್ಯುತ್ ಇರುತ್ತೆ ಆ ಭಾಗ ಅಭಿವೃದ್ಧಿ ಆಗುತ್ತೆ ನಮ್ಮ ಸರ್ಕಾರ ಕುಡಿಯುವ ನೀರಿಗೆ ದುಡ್ಡುಕೊಟ್ರು ಸದ್ಯ ಕುಂಟಕೊಂತ ನಡೆದಿದೆ
ಎಲ್ಲಾ ಮನೆಗೆ ಹರ್ ಗರ್ ಜಲ್ ಯೋಜನೆಯೊಳಗೆ ಮನೆಮನೆಗೆ ನಳವನ್ನ ಜೋಡನೆ ಮಾಡಲಾಗಿದೆ
ಬಿಜೆಪಿ ಅಂದ್ರೆ ಅಭಿವೃದ್ಧಿ ಸರ್ಕಾರ ಕಾಂಗ್ರೆಸ್ ಅಂದರೆ ಸ್ವಜನಪಾತ ಸರ್ಕಾರವೆಲ ಎಲ್ಲ ಚುನಾವಣೆಯಲ್ಲಿ ಹೊಂದಾಣಿಕೆಯಿಂದ ಹೋಗೋಣ. ಅಭ್ಯರ್ಥಿಗಳನ್ನ ಗೆಲ್ಲಿಸುವ ಕೆಲಸ ಮಾಡೋಣಅಲೈನ್ಸ್ ಇಲ್ಲಾ ಅಂದಾಗ್ಲೂ ಕೂಡ ಇಲ್ಲಿನ ಜೆಡಿಎಸ್ ನಾಯಕರು ನನ್ನ ಎಲೆಕ್ಸನ್ ಮಾಡಿದ್ದಾರೆ ಎಲ್ಲರೂ ಒಟ್ಟಾಗಿ ಹೋಗೋಣ ಈ ಬಾರಿ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಹೆಚ್ಚಿನ ಅಂತರದಲ್ಲಿ ಗೆಲ್ಲಲು ಶ್ರಮೀಸೋಣ. ಪ್ರಧಾನಿ ನರೇಂದ್ರ ಮೋದಿಯವರಿಂದ ಈ ದೇಶ ಮುನ್ನಡೆಯುತ್ತಿದೆ
ದೇಶ ಮುಂದಿನ ದಿನದಲ್ಲಿ ನಂ ಒನ್ ದೇಶವಾಗಿ ಹೊರಹೊಮ್ಮುತ್ತದೆ
ಪಾಕಿಸ್ತಾನ ಯಾವ ಲೆಕ್ಕಾ ಇಲ್ಲಾ ನಮಗ,ಹುಃ ಅಂದ್ರೆ ಒಂದ್ ತಾಸ್ ನಲ್ಲಿ ಮುಗಿಸ್ತಾರ ನಮ್ಮ ಸೈನಿಕರು
ಜಗತ್ತಿನಲ್ಲಿ ಮೂರನೇ ಸ್ಥಾನಕ್ಕೆ ನಮ್ಮ ಸೈನ್ಯ ಬಂದಿದೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅಷ್ಟು ಸೇನೆಯಲ್ಲಿ ಬದಲಾವಣೆ ತರಲಾಗಿದೆ ಎಂದರು.
ಕಾಂಗ್ರೆಸ್ ಮನೆಗೆ ಕಳಿಸುವರೆಗೂ ಸಹ ಮೈತ್ರಿ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದಲ್ಲಿ ಮುಳುಗಿರುವ ಕಾಂಗ್ರೆಸ್ ಅನ್ನು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮನೆಗೆ ಕಳುಹಿಸಲಿದೆ. ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಮೈತ್ರಿಯು ಹಾಲಿನಲ್ಲಿ ಸಕ್ಕರೆ ಹಾಕಿದಂತೆ ಇರಬೇಕು. ಉಪಪ ಹಾಕಿದಂತೆ ಆಗಬಾರದು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಈಡೇರಿಸಿಲ್ಲ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ. ಯುಪಿಎ ಸರ್ಕಾರ ಅವಧಿಯಲ್ಲಿ ಅನೇಕ ಹಗರಣಗಳು ಬೆಳಕಿಗೆ ಬಂದಿದ್ದವು ಎಂದರು. ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಲೇ ಬಂದಿವೆ. ಆ ಅವಧಿಯಲ್ಲಿ
ಸ್ವಜನಪಕ್ಷಪಾತ, ಭ್ರಷ್ಟಾಚಾರ ಹೆಚ್ಚಾಗಿರುವುದು ಕಂಡುಬರುತ್ತದೆ ಎಂದು ದೂರಿದ ಜೋಶಿ, ಬಿಜೆಪಿ ಹಾಗೂ ಜೆಡಿಎಸ್ ಆಡಳಿತ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಯಾಗಿದೆ ಎಂದು ಹೇಳಿದರು.
ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಶಾಸಕ ಎಂ.ಆರ್.ಪಾಟೀಲ, ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮುಖಂಡರಾದ ಶಿವಶಂಕರ ಕಲ್ಲೂರ, ಬಿ.ಬಿ. ಗಂಗಾಧರಮಠ, ಹಜರತಅಲಿ ಜೋಡಮನಿ, ಷಣ್ಮುಕ ಗುರಿಕಾರ ಹಾಗೂ ಇತರರು ಇದ್ದರು.