ಕಲಬುರಗಿ: ಬೆಂಗಳೂರಿನಲ್ಲಿರುವ ನನ್ನ ವಿಕಾಸಸೌಧ ಕಚೇರಿಗೆ 10 ದಿನಗಳ ಹಿಂದೆ ಪತ್ರ ಬಂದಿದ್ದು ನಿನ್ನನ್ನ ಎನ್ ಕೌಂಟರ್ ಮಾಡಿ ಮುಗಿಸ್ತೇವೆ ಅಂತ ಪತ್ರ ಬರೆದಿದ್ದಾರೆ..ಆ ಪತ್ರ ಕಲಬುರಗಿಯಿಂದಲೇ ಪೋಸ್ಟ್ ಆಗಿದ್ದು ಕನ್ಫರ್ಮ್ ಆಗಿದೆ..
ಇಬ್ಬರು ವ್ಯಕ್ತಿಗಳು ಸಹಿ ಮಾಡಿದ ಆ ಪತ್ರದ ಬಗ್ಗೆ ತನಿಖೆ ಮಾಡುವಂತೆ ವಿಧಾನ ಸೌಧ ಪೋಲೀಸರಿಗೆ ತಿಳಿಸಿದ್ದೇನೆ..ಮಾತ್ರವಲ್ಲ ಎಫ್ ಐಆರ್ ಸಹ ದಾಖಲಿಸಿದ್ದೇನೆ ಅಂತ ಖುದ್ದು ಪ್ರಿಯಾಂಕ್ ಖರ್ಗೆ ಇವತ್ತು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿಷ್ಯ ತಿಳಿಸಿದ್ದಾರೆ.