ಕೋಲಾರ: ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಸಂಸದ ಮುನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಇಬ್ಬರು ಮಂತ್ರಿ ಇದ್ದಾರೆ,5 ಶಾಸಕರು ಇದ್ದಾರೆ. ಅವರಲ್ಲಿರುವ ವಿರೋಧಿ ಬಣ ಇನ್ನೊಂದು ಬಣಕ್ಕಿಂತ ಸ್ಟ್ರಾಂಗ್ ಇದೆ ಅಂತ ಅವರ ಹೈಕಮಾಂಡ್ ಗೆ ಗೊತ್ತು.
ಅವರು ಯಾರು ರಾಜೀನಾಮೆ ಕೊಡೋದಿಲ್ಲ. ತುಂಬಾ ಕಷ್ಟ ಪಟ್ಟು ಅವರೆಲ್ಲಾ ಶಾಸಕರು ಆಗಿದ್ದಾರೆ. ಉಪ ಚುನಾವಣೆ ಏನಾದ್ರು ಬಂದ್ರೆ ಸಾಯಬೇಕು ಇಲ್ಲ ಸಾಯಿಸಬೇಕು,ನಾವು ಸಿದ್ಧರಿದ್ದೇವೆ ಎಂದು ಹೇಳಿದರು.ಸಂಸದ ಮುನಿಸ್ವಾಮಿ ಕುಮಾರಸ್ವಾಮಿ ಬಳಿ ಟಿಕೇಟ್ ಕೇಳಿರುವ ಬಗ್ಗೆ ಪ್ರತಿಕ್ರಿಯೇ ನೀಡಿರುವ ಅವರು,
ನಮ್ಮಲ್ಲಿ ಯಾರು ಹೋಗಿ ಟಿಕೇಟ್ ಕೇಳಿಲ್ಲ. NDA ಪರವಾಗಿ ಕೆಲಸ ಮಾಡ್ತೀವಿ ಅಂತ ಅಷ್ಟೇ ನಿನ್ನೆ ಹೇಳಿದ್ದೇನೆ. ನಾನು ಕುಮಾರಸ್ವಾಮಿ ಬಳಿ ಟಿಕೇಟ್ ಕೇಳಿಲ್ಲ. ಸೂಕ್ತವಾದ ಅಭ್ಯರ್ಥಿ ಕೊಡಿ ಅಂತ ಅಷ್ಟೇ ಹೇಳಿದ್ದೇನೆ. ಮೋದಿ ಮತ್ತೆ ಪ್ರಧಾನಿ ಆಗಬೇಕು. ಕುಮಾರಸ್ವಾಮಿ ಆರೋಗ್ಯ ವಿಚಾರಸಿ ಬಂದಿದ್ದೇನೆ ಅಷ್ಟೇ ಎಂದು ತಿಳಿಸಿದರು.