ಗದಗ: ನೀರಿಗಾಗಿ ರಸ್ತೆ ತಡೆ ನಡೆಸಿ ನಾರಿಯರ ಪ್ರತಿಭಟನೆ ನಡೆಸಿದ ಘಟನೆ ಗದಗ ನಗರದ ಫೀಲ್ಡ್ ಮಾರ್ಶಲ್ ಕೆ ಎಮ್ ಕಾರ್ಯಪ್ಪ ವೃತ್ತದಲ್ಲಿ ನಡೆದಿದೆ. ಸಿಧ್ಧಾರ್ಥ ನಗರದ ಮಹಿಳೆಯರು ಹಾಗೂ ಯುವಕರಿಂದ ಏಕಾಏಕಿ ಪ್ರತಿಭಟನೆ ನಡೆಸಲಾಗಿದ್ದು, ತಮಟೆ ಬಾರಿಸೋ ಮೂಲಕ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ನಡುವೆ ರಸ್ತೆ ದಾಟಲು ಯತ್ನಿಸಿದ ವಾಹನ ಸವಾರರೊಂದಿಗೆ ವಾಗ್ವಾದ ನಡೆಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರತಿಭಟನಾ ನಿರತರ ಮನ ಒಲಿಸಲು ಯತ್ನ ಮಾಡಿದ್ದಾರೆ.
ಆದ್ರೆ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮಗೆ ನೀರು ಸಮರ್ಪಕವಾಗಿ ಸಿಗ್ತಾ ಇಲ್ಲ ಎಂದು ತಮಟೆ ನಾದಕ್ಕೆ ತಕ್ಕಂತೆ ಕೊಡ ಹಿಡಿದು ಕುಣಿದು ನೀರಿಗಾಗಿ ಪ್ರತಿಭಟಿಸಿದರು. ಫ್ಲೋರೈಡ್ ನೀರನ್ನೇ ಬಳಸಬೇಕಾದ ಪರಿಸ್ಥಿತಿ ಇದೆ. ಆ ನೀರನ್ನ ಕುಡಿದು ಆರೋಗ್ಯ ಹದಗೆಡ್ತಾ ಇದೆ ಅಂತಾ ಕಿಡಿ ಎಂದು ಕಿಡಿಕಾರಿದ್ದಾರೆ.