ತುಮಕೂರು : ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದು ಅರ್ಚಕ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮದಲ್ಲಿ ನಡೆದಿದೆ.
ಶ್ರೀ ಹುಲಿಯೂರಮ್ಮ ದೇವಿ ಜಾತ್ರಾ ಪ್ರಯುಕ್ತ ಬೆಂಕಿಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವರನ್ನ ಹೊತ್ತು ಕೊಂಡು ಕೆಂಡ ಹಾಯುವಾಗ ಅರ್ಚಕ ಮನು ಎಡವಿ ಬೆಂಕಿ ಕೆಂಡದೊಳಗೆ ಬಿದ್ದು ಗಾಯವಾಗಿದೆ.
BIGG News: ಮಂಡ್ಯದಿಂದ HDK ಕಣಕ್ಕೆ ಇಳಿಯೋದು ಫಿಕ್ಸ್: ಅಧಿಕೃತ ಘೋಷಣೆಯೊಂದೆ ಬಾಕಿ!
ಕೂಡಲೇ ಸ್ಥಳಿಯರು ಅರ್ಚಕ ಮನು ಅವರನ್ನು ರಕ್ಷಿಸಿದ್ದಾರೆ. ಸುಟ್ಟ ಗಾಯಗಳಾದ ಹಿನ್ನೆಲೆ ಕುಣಿಗಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದೇವತೆಗೆ ಕೆಂಡದ ನೈವೇದ್ಯವನ್ನೇ ಅರ್ಪಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಶಕ್ತಿ ದೇವತೆ ಸತ್ಯವತಿಯ ಕೆಂಡದ ಜಾತ್ರೆ ಆಚರಿಸಲಾಗುತ್ತದೆ. ಕೆಂಡದ ಪವಾಡ ನೋಡಲು ಸಾವಿರಾರು ಜನರು ಆಗಮಿಸುತ್ತಾರೆ.