ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಹಲವಾರು ಆಕಾಂಕ್ಷಿಗಳಿಗೆ ಅಸಮಾಧಾನವಾಗಿದ್ದು ಬಂಡಾಯದ ಭುಗಿಲೆದ್ದಿದ್ದು ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅಂದಹಾಗೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲೂ ಅಸಮಾಧಾನ ಇಲ್ಲ ಯಾಕಂದ್ರೆ ಟಿಕೆಟ್ ಪಡೆಯೋಕೆ ಯಾರೂ ಮುಂದಾಗಿಲ್ಲ ಆದ್ರೆ ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದಾರೆ ಹಾಗಾಗಿ ಅಸಮಾಧಾನ ಆಗಿರೋದು ಸಹಜ ಎಂದು ತಿಳಿಸಿದ್ದಾರೆ.
BY Vijayendra: ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ಕೈ ತಪ್ಪಿದ ವಿಚಾರ: ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದೇನು?
ನಿನ್ನೆ ಕರಡಿ ಸಂಗಣ್ಣ ಅವರನ್ನ ಕರೆಸಿ ಸಮಾಧಾನ ಮಾಡುವ ಕೆಲಸ ಆಗಿದೆ ಹಾಗೆ ಯಡಿಯೂರಪ್ಪ ಅವರು ದಾವಣಗೆರೆಗೆ ಹೋಗ್ತಿದ್ದಾರೆ. ಅಲ್ಲೂ ಸಮಾಧಾನ ಮಾಡುವ ಕೆಲಸ ಆಗಲಿದೆ ಎಂದು ತಿಳಿಸಿದರು.
ನಾನು ಪ್ರಚಾರಕ್ಕೆಹೊರಟಿದ್ದೇನೆ ಹಾಗೆ ನಾಳೆ ಮೈಸೂರು, ಮಡಿಕೇರಿ ಪ್ರವಾಸ ಆರಂಭಿಸಲಿದ್ದೇನೆ. 27ರ ಸಂಜೆ ಬಿಜೆಪಿ, ಜೆಡಿಎಸ್ ಮುಖಂಡರ ಸಭೆ ಕರೆಯಲಾಗಿದೆ 28ರಂದು ಮಂಡ್ಯದಲ್ಲಿ ಒಟ್ಟಿಗೆ ಸಭೆ ಕರೆದಿದ್ದು ಕುಮಾರಸ್ವಾಮಿ ಕೂಡ ಇರ್ತಾರೆ. ಒಟ್ಟಾಗಿ ಸಭೆ ಮಾಡಿ ಚರ್ಚೆ ಮಾಡ್ತೀವಿ ಇದಕ್ಕೆಲ್ಲಾ ಸರಿಯಾದ ಉತ್ತರ ಸಿಗುತ್ತೆ ಎಂದು ಹೇಳಿದರು.