ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶಿವರಾಜ್ ತಂಗಡಗಿ ವಿಜಯೇಂದ್ರ ಕಿಡಿಕಾರಿದ್ದಾರೆ
HDK Meeting: ಮಂಡ್ಯ, ಕೋಲಾರ ಅಭ್ಯರ್ಥಿ ಘೋಷಣೆ ವಿಚಾರ: ದಳಪತಿಗಳ ನಿವಾಸದಲ್ಲಿ ಹೈವೋಲ್ಟೇಜ್ ಮೀಟಿಂಗ್!
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಲೆ ತಿರುಗುತ್ತಿದೆ. ಮೋದಿ ಅವರ ಜನಪ್ರಿಯತೆ ತಡೆಯಲಾಗದೆ ಹತಾಶೆ ಹೇಳಿಕೆ ನೀಡ್ತಿದ್ದಾರೆ. ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ15-20 ಸೀಟು ಗೆಲ್ತೀವಿ ಅನ್ನೋ ಚಿಂತನೆಯಲ್ಲಿದ್ರು. ಆದ್ರೆ ಯಾವ ಸಚಿವರೂ ಚುನಾವಣೆಗೆ ನಿಲ್ಲಲಿಲ್ಲ. ಮತದಾನ ಆದ ಬಳಿಕ ಅವರಿಗೆ ಕಪಾಳಮೋಕ್ಷ ಆಗಲಿದೆ ಎಂದು ತಿಳಿಸಿದರು.
ಮಂಡ್ಯ ಸಭೆಗೆ ಸುಮಲತಾಗೆ ಆಹ್ವಾನ ವಿಚಾರ ಬಗ್ಗೆಯೂ ಮಾತನಾಡಿ ಮಂಡ್ಯ ಕ್ಷೇತ್ರ ಜೆಡಿಎಸ್ಗೆ ಬಿಟ್ಟುಕೊಟ್ಟ ಸಂಧರ್ಭದಲ್ಲಿ. ಎನ್ಡಿಎ ಮಿತ್ರಕೂಟ ಒಟ್ಟಿಗೆ ಚುನಾವಣೆ ಎದುರಿಸಬೇಕಿದೆ. ಮಂಡ್ಯ ಬಿಜೆಪಿ ಮುಖಂಡರ ಸಭೆ ಕರೆಯಲಾಗಿದೆ. ಸುಮಲತಾ ಅವರನ್ನೂ ಭೇಟಿಯಾಗ್ತೀನಿ. ಅವರನ್ನೂ ವಿಶ್ವಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತೇನೆ ಎಂದರು.