ಗದಗ:- ಬಣ್ಣದಾಟ ಆಡಿ ನದಿಗೆ ಸ್ನಾನ ಮಾಡಲು ತೆರಳಿದ್ದ ಯುವಕ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜ್ನಲ್ಲಿ ಜರುಗಿದೆ.
ವ್ಯಾಪಾರ ಕೇಂದ್ರಗಳಾಗುತ್ತಿವೆ ಪೊಲೀಸ್ ಠಾಣೆಗಳು – ಲೋಕಾಯುಕ್ತ ಕೋರ್ಟ್!
23 ವರ್ಷದ ಯುವರಾಜ ವಿಶ್ವನಾಥ ಕೊಂಪಿ ಮೃತ ದುರ್ದೈವಿ ಎನ್ನಲಾಗಿದ್ದು, ವಿಜಯನಗರ ಜಿಲ್ಲೆ ಹಿರೇಹಡಗಲಿ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಹೋಳಿ ಹಬ್ಬ ಮುಗಿಸಿಕೊಂಡು ಸ್ನಾನಕ್ಕೆ ಎಂದು ಸ್ನೇಹಿತರು ನದಿಗೆ ಬಂದಿದ್ದರು. ಶಿಂಗಟಾಲೂರು ಏತ ನೀರಾವರಿಯ ಬ್ಯಾರೇಜ್ ನಲ್ಲಿ ಈಜಲು ತೆರಳಿದ್ದರು.
ಸ್ನಾನ ಮಾಡಲು ತೆರಳಿದಾಗ ವಿಶ್ವನಾಥ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.