ಗದಗ: ನರಿ ಸರಣಿ ದಾಳಿ ಹಲವು ಜನರಿಗೆ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದ ಬಳಿ ನಡೆದಿದೆ. ನರಿಗೆ ಹುಚ್ಚು ಹಿಡಿದಿರೋ ಶಂಕೆಯಾಗಿದ್ದು, ಸಮೀರ್ ಹೆಸರೂರು, ಬೀಬಿಜಾನ್ ಬಟ್ಟೂರ,
ಸಂತೋಷ ಲಮಾಣಿಗೆ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಕಿರಣ್ ಅವರಿಂದ ಚಿಕಿತ್ಸೆ ಕೊಡಲಾಗುತ್ತಿದೆ. ಕಾಲು, ಕೈ ಬೆರಳು ಸೇರಿದಂತೆ ವಿವಿದೆಡೆ ಕಚ್ಚಿದ್ದು, ಅರಣ್ಯ ಇಲಾಖೆಯವರು ನರಿ ಸೆರೆಹಿಡಿಯುವಂತೆ ಸ್ಥಳೀಯರ ಆಗ್ರಹ ಮಾಡಿದ್ದಾರೆ.