ಹುಬ್ಬಳ್ಳಿ; ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಇದನ್ನ ಮರೆಮಾಚಲು ಮತ್ತೇ ಹಾಲಿ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ತಮ್ಮ ವಿರುದ್ಧ ಅಸಮರ್ಥ ಅಭ್ಯರ್ಥಿ ಹಾಕಿಕೊಂಡು ಒಳ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಯುವ ಮುಖಂಡ ರಾಜು ಸಾ ನಾಯಕವಾಡಿ ಆರೋಪಿಸಿದರು ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಏನು ಅಭಿವೃದ್ಧಿ ಮಾಡಿದ್ದಾರೆ 20 ವರ್ಷಗಳ ಅಧಿಕಾರದಲ್ಲಿ ಇದ್ದವರು ಸಾಕಷ್ಟು ಜನಪ್ರಿಯತೆ ಹೊಂದಿದವರು ಕಾರಣ ಈ ಅವಧಿಯಲ್ಲಿ ತಾವು ಪ್ರಚಾರ ಮಾಡಬಾರದು ತಮ್ಮ ಕೆಲಸ ಪ್ರಚಾರಕ್ಕೆ ಬರಬೇಕಿತ್ತು ಆದರೆ ಎಲ್ಲಿ ಅಭಿವೃದ್ಧಿ ಕಾಮಗಾರಿಗಳು. ಇನ್ನು ಹುಬ್ಬಳ್ಳಿ ಧಾರವಾಡ ಅವಳಿನಗರ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 1500 ಕೋಟಿ ಅನುದಾನ ಬಂದಿದ್ದು ಇನ್ನು ನಗರಗಳು ಧೂಳು ಮುಕ್ತ ಆಗಿಲ್ಲ ಯಾಕೆ ಈ ಬಗ್ಗೆ ಮೊದಲು ಮಾತನಾಡಿ, ಇದರ ಜೊತೆಗೆಎಲ್ಲ ಕಾಮಗಾರಿಗಳ ಸರಿಯಾಗಿ ನಿಗದಿತ ಸಮಯದಲ್ಲಿ ಆಗತಾ ಇಲ್ಲ ಇದರಿಂದ ಜನರಿಗೆ ತೀವ್ರ ತೊಂದರೆ ಆಗತಾ ಇದೆ ಇದಕ್ಕೆ ಉತ್ತರ ಕೊಡಿ.
ಇನ್ನು ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ 24/7 ನೀರು ಸರಬರಾಜು ಅಂತಾ ಹೇಳಿ 20 ವರ್ಷಗಳು ಆದವು ಇದುವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಕೇವಲ ಕುಡಿಯುವ ನೀರಿಗಾಗಿ ಕೋಟ್ಯಾಂತರ ಹಣ ವ್ಯಯ ಮಾಡಲಾಗಿದೆ ಎನ್ನುವ ತಾವು ಇದಕ್ಕೆ ಮೊದಲು ಉತ್ತರ ಕೊಡಿ ನೀರಿನ ಸಮಸ್ಯೆ ಏನು ಅಂತಾ ಮೊದಲು ತಿಳಿದುಕೊಳ್ಳಿ ಐದು ಹಾಗೂ ಕೊನೆಯ ಪ್ರಶ್ನೆ ಲಕ್ಷಾಂತರ ಯುವಕರಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು ಇದುವರೆಗೆ ಸರಿಯಾಗಿ ಉದ್ಯೋಗ ನೀಡಿಲ್ಲ ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ಮಾಡಿಲ್ಲ.ಈಗ ಅಬ್ಬರದ ಪ್ರಚಾರಕ್ಕೆ ಮುಂದಾಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿದ್ದರೆ ಪ್ರಚಾರವೇ ಅವರಿಗೆ ಅಗತ್ಯವಿರಲಿಲ್ಲ ಎಂದರು.