ಬೆಂಗಳೂರು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದೇ ತಡ ಅವರ ಮನೆಯೀಗ ದೋಸ್ತಿ ಪಕ್ಷಗಳ (BJP_JDS) ಪವರ್ಸೆಂಟರ್ ಆಗಿ ಬದಲಾಗಿದೆ. ಆರೋಗ್ಯ ವಿಚಾರಿಸುವ ಜೊತೆ ಜೊತೆಗೆ ನಮ್ಮ ಗೆಲುವಿಗೆ ನಿಮ್ಮ ಸಹಕಾರ ಬೇಕು ಎನ್ನುತ್ತಾ ಬಿಜೆಪಿ ನಾಯಕರು ಇಂದು ಕುಮಾರಸ್ವಾಮಿ ಭೇಟಿಗೆ ಸಾಲುಗಟ್ಟಿದ್ದರು.
Holi Colours: ಹೋಳಿ ಹಬ್ಬಕ್ಕೆ ಈ ರೀತಿ ಬಣ್ಣ ಬಳಸೋದ್ರಿಂದ ಕ್ಯಾನ್ಸರ್, ಕಣ್ಣಿನ ಸಮಸ್ಯೆ ಗ್ಯಾರಂಟಿ..!
ಬೆಂಗಳೂರು ದಕ್ಷಿಣ ಅಭ್ಯರ್ಥಿ ತೇಜಸ್ವಿ ಸೂರ್ಯ (Tejaswi Surya), ಚಿಕ್ಕಬಳ್ಳಾಪುರ ಅಭ್ಯರ್ಥಿ ಕೆ ಸುಧಾಕರ್ (K Sudhakar), ಬಳ್ಳಾರಿ ಅಭ್ಯರ್ಥಿ ಶ್ರೀರಾಮುಲು (Sriramulu) ಭೇಟಿ ನೀಡಿ ದಳಪತಿಗಳ ಸಹಕಾರ ಕೋರಿದರು.ಮಾಜಿ ಮಂತ್ರಿ ಗೋವಿಂದ ಕಾರಜೋಳ ಕೂಡ ಕುಮಾರಸ್ವಾಮಿ ನಿವಾಸದಲ್ಲಿ ಕಾಣಿಸಿಕೊಂಡರು. ಟಿಕೆಟ್ ವಂಚಿತ ಸಂಸದ ಕೊಪ್ಪಳದ ಸಂಗಣ್ಣ ಕರಡಿ ಸಹ ಕುಮಾರಸ್ವಾಮಿ ಭೇಟಿ ಮಾಡಿ ಚರ್ಚೆ ನಡೆಸಿದ್ರು. ಕುಶಲ ವಿಚಾರಿಸಲು ಬಂದಿದ್ದೇ ಅಷ್ಟೇ.. ನಾನೇನು ಜೆಡಿಎಸ್ ಸೇರಲ್ಲ ಎಂದು ಸಮಜಾಯಿಷಿ ನೀಡಿದರು.