ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಇವರ ಸಹಯೋಗದೊಂದಿಗೆ ಶ್ರೀ ಯೋಗಿನಾರಾಯಣ ಯಾತಿಂದ್ರರ ಜಯಂತೋತ್ಸವ ಕಾರ್ಯಕ್ರಮವನ್ನು ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು. ಇದೇ ಸಂದರ್ಭದಲ್ಲಿ ವಕೀಲ ಶ್ರೀನಿವಾಸ್ ಮಾತನಾಡಿ ಶ್ರೀ ಕೈವಾರ ನಾರಾಯಣ ತಾತಯ್ಯನವರ ಜಯಂತಿಗೆ ಲೋಕಸಭೆ ಚುನಾವಣೆಯ ನೀತಿ ಸಂಹಿತೆಯ ಕಾರಣದ ಹಿನ್ನೆಲೆ ಸರಳ ರೀತಿಯ ಆಚರಣೆ ಮಾಡಲಾಗುತ್ತಿದೆ ಎಂದರು.
ಇನ್ನು ಮುಂದಿನ ವರ್ಷದಲ್ಲಿ ಹೆಚ್ಚಿನ ಜನಸಂಖ್ಯೆ ಸೇರಿಸಿ ಕಾರ್ಯಕ್ರಮ ಮಾಡಲಾಗುವುದು ಸಮುದಾಯದ ಉಪ ಜಾತಿಗಳನ್ನು ಜನಾಂಗದ ವ್ಯಕ್ತಿಗಳು ಹೇಳುವ ಬದಲಿಗೆ ಮೂಲ ಬಲಿಜ ಎಂದು ನಮೂದಿಸಲು ಕಾರ್ಯವನ್ನು ಬೆಳಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು, ಸಮಾಜದಲ್ಲಿ ಕೈವಾರ ತಾತಯ್ಯನವರ ಬಲಿಜ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಅವರು ದೇಶಕ್ಕೆ ಮಾದರಿಯಾಗಿದ್ದಾರೆ.
ಆದ್ದರಿಂದ ಜನರು ಜೀವನದಲ್ಲಿ ಕೈವಾರ ತಾತಯ್ಯನವರ ಕೀರ್ತನೆಗಳನ್ನು ಅಳವಡಿಕೊಂಡು ಉತ್ತಮ ಸಮಾಜದ ಕಡೆ ಸಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರು ರಘು (ಚಿಟ್ಟಿ ), ಕೆ ಎಸ್ ಆರ್ ಟಿ ಸಿ ಪ್ರಸಾದ್, ಸುರೇಶ ಎಸ್, ರಾಜೇಶ್ ಸಿ ಟಿ ಓ, ಮಂಜು ಎಂ ಜಿ, ಮಹೇಶ್ ಬಾಬು, ಬಾಲಾಜಿ, ಕೆ ವಿ ರುಕ್ಮ0ಗಾದ, ಕಿಟ್ಟಣ್ಣ, ವೆಂಕಟಸ್ವಾಮಿ, ರವೀಂದ್ರ, ಚಲಪತಿ,ಗೋವರ್ಧನ್,ಮುಂತಾದ ಸಮಾಜದ ಮುಖಂಡರು ಭಾಗವಸಿದ್ದರು.