ಚಿತ್ರದುರ್ಗ:- ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ ಎನ್ ಚಂದ್ರಪ್ಪ ಘೋಷಣೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಿ ಎನ್ ಚಂದ್ರಪ್ಪ ಭೇಟಿ ನೀಡಿದ್ದು, ಕಚೇರಿ ಮುಂದೆ ಬೃಹತ್ ಹಾರ ಹಾಕಿ ಕಾರ್ಯಕರ್ತರು ಎತ್ತಿ ಕುಣಿದಾಡಿ ಬರ ಮಾಡಿಕೊಂಡಿದ್ದಾರೆ.
ಚಂದ್ರಪ್ಪ ಅವರನ್ನು ಬರ ಮಾಡಿಕೊಳ್ಳುವಾಗ ತಳ್ಳಾಟ ನೂಕಾಟ ನಡೆದಿದೆ. ಇದೇ ಸಮಯದಲ್ಲಿ ಮಾತಾಡಿದ ಚಂದ್ರಪ್ಪ, ಐದು ವರ್ಷಗಳು ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದು, ಪರಾಭವ ಕಾಣಬೇಕಾಯ್ತು. ಪರಾಭವದ ನಂತರವೂ ಕೂಡ ನಿರಂತರ ಕಾರ್ಯಚಟುವಟಿಕೆಗಳಲ್ಲಿಪಾಲ್ಗೊಂಡಿದ್ದೇನೆ ಮನೆ ಮಗನಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ನಾವು ಗೆದ್ದೇ ಗೆಲ್ಲುತ್ತೇವೆ. ಜಿಲ್ಲೆಯ ಎಲ್ಲಾ ಮಾಜಿ ಹಾಲಿ ಸಚಿವರು ಮತ್ತು ಶಾಸಕರು ಹಾಗೂ ಕಾರ್ಯಕರ್ತರ ಶಿಫಾರಸ್ಸಿನ ಮೇರೆಗೆ ಎಐಸಿಸಿ ಟಿಕೆಟ್ ನೀಡಿದೆ.
ಜಮೀನು ಪೋಡಿ ಮಾಡಲು ಹಣಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಸರ್ವೆಯರ್..!
ಎಲ್ಲವನ್ನೂ ಅಳೆದು ತೂಗಿ ಪಕ್ಷ ಟಿಕೆಟ್ ನೀಡಿದೆ. ಅಭ್ಯರ್ಥಿಯ ಪ್ರಚಾರಕರಾಗಿ ಸಿದ್ದರಾಮಯ್ಯ ಬರುತ್ತಾರೆ ಅವರೇ ಸ್ಟಾರ್ ಪ್ರಚಾರಕರು. ಬಿಜೆಪಿಯವರ ಬಗ್ಗೆ ಟೀಕೆ ಮಾಡಲು ಹೋಗಲ್ಲ ಆ ಸಮಯವನ್ನು ಪಕ್ಷದ ಸಂಘಟನೆಗೆ ಬಳಸುತ್ತೇನೆ. ಎಲ್ಲಾ ಆಕಾಂಕ್ಷಿಗಳನ್ನು ನಾನು ಮಾತಾಡಿಸುತ್ತೇನೆ. ನಾವೆಲ್ಲರೂ ಸೇರಿಪಕ್ಷ ಸಂಘಟನೆ ಮಾಡೋಣ ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮನ್ನು ಗುರುತಿಸುತ್ತದೆ. ಬೇಸರವಾಗುವುದು ಬೇಡ. ಜಿಲ್ಲೆಯಲ್ಲಿ ನನಗೊಬ್ಬನಿಗೆ ಟಿಕೆಟ್ ಸಿಕ್ಕಿಲ್ಲ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನಿಗೆ ಟಿಕೆಟ್ ಸಿಕ್ಕಿದೆ. ನಾನು ಜಾತಿಗಾಗಿ ರಾಜಕಾರಣ ಮಾಡಿವನಲ್ಲ ಜಾತಿ ಮುಂದಿಟ್ಟುಕೊಂಡು ರಾಜಕೀಯ ಮಾಡಿಲ್ಲ. ತೀರಾ ವಿಕೋಪಕ್ಕೆ ಹೋದಾಗ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ
ಹತ್ತು ವರ್ಷಗಳಕಾಲ ನಾನು ತೆಜೋವಧೆಗೆ ಒಳಗಾಗಿದ್ದೇನೆ. ಜಾತಿ ಹೆಸರು ಬದಲಾಯಿಸಿ ನಕಲಿ ದಾಖಲೆ ಸೃಷ್ಠಿಸಿದ ಇಬ್ಬರ ಮೇಲೆ ಎಫ್ ಐ ಆರ್ ದಾಖಲಾಗಿದೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ದೂರು ಕೊಟ್ಟಿದ್ದೇನೆ ನನ್ನ ರಕ್ಷಣೆಗಾಗಿ ನಾನು ದೂರು ಕೊಟ್ಟಿದ್ದೇನೆ. ಹತ್ತು ವರ್ಷಗಳ ಕಾಲ ನಾನು ನೊಂದಿದ್ದೇನೆ. ಜಿಲ್ಲೆಯ ಅಭಿವೃದ್ದಿಗಾಗಿ ಜಾತ್ಯಾತೀತೆಗಾಗಿ ಸಂವಿಧಾನ ಉಳಿವಿಗಾಗಿ ಜನತೆ ಮತ ಹಾಕಬೇಕಿದೆ ಎಂದರು.
ಕೇಂದ್ರೀಯ ವಿದ್ಯಾಲಯ ಕೇವಲ ಒಂದು ತಿಂಗಳು ಕಳೆದಿದ್ದರೆ ಮಂಜೂರಾಗುತ್ತಿತ್ತು. ನಾನು ಸಂಪೂರ್ಣವಾಗಿ ಫಾಲೋಅಪ್ ಮಾಡುತ್ತಿದೆ.. ನಾನು ಹಿಂದಿನ ಸಚಿವರನ್ನು ಟೀಕೆ ಮಾಡಲು ಹೋಗುವುದಿಲ್ಲ ನನ್ನ ಕೆಲಸ ಮಾತ್ರ ಮಾಡುತ್ತೇನೆ. ಭದ್ರಾ ಯೋಜನೆಗಾಗಿ ಸಾಕಷ್ಟು ಓಡಾಡಿದ್ದೇನೆ. ಆದರೆ ಒಂದು ಸೇತುವೆ ಮಾಡಿ ಸಚಿವರು ಭರ್ಜರಿ ಪ್ರಚಾರ ತೆಗೆದುಕೊಂಡರು. ಕಾಂಗ್ರೆಸ್ ನವರು ಪ್ರಚಾರ ಪ್ರಿಯರಲ್ಲ ಕೆಲಸ ಮಾಡಿ ತೋರಿಸುತ್ತಾರೆ. ಪರಿಣಾಮಕಾರಿ ಕೆಲಸ ಮಾಡಿದ್ದರಿಂದ ನಾನು ಗೆದ್ದೆ ಬಿಟ್ಟಿದ್ದೇನೆಂದು ಕಾರ್ಯಕರ್ತರು ಪಟಾಕಿ ತಂದಿಟ್ಟುಕೊಂಡಿದ್ದರು. ಗೆದ್ದವರು ಸೋತಿದ್ದೆವೆಂದು ಆನೇಕಲ್ ನಲ್ಲಿದ್ದರು ಆದರೆ 12 ಗಂಟೆ ಮೇಲೆ ಅವರೇ ಮುನ್ನಡೆ ಸಾಧಿಸಿದ್ದರು. ಇದು ಇವಿಎಂ ನ ಕಾರಾಮತ್ತೋ ಏನೋ ಗೊತ್ತಿಲ್ಲ ಮತವನ್ನು ಜನರು ಹಾಕುತ್ತಾರೆ. ಆದರೆ ನಿರ್ಣಯವನ್ನು ಇವಿಎಂ ಮಾಡುತ್ತದೆ ಇದು ದುರ್ದೈವ ಇದರಿಂದ ನಾನು ಸೋತೆ.ನಾನು ಗೆದ್ದಾಗ 4.5 ಲಕ್ಷ ಗಳಿಸಿದ್ದೆ ಗೆದ್ದಾಗ 5.5 ಲಕ್ಷ ಮತ ಗಳಿಸಿದ್ದೆ ನನಗೆ ವಿರೋಧಿ ಅಲೆ ಇರಲಿಲ್ಲ ಆದರೆ ಜನ ನನಗೆ ಒಂದು ಲಕ್ಷ ಹೆಚ್ಚು ಮತವನ್ನು ಕೊಟ್ಟಿದ್ದರು ಎಂದರು.