ಹುಬ್ಬಳ್ಳಿ; ನಗರದ ಗುಜರಾತಿ ಮಹಿಳಾ ಮಂಡಳ ವತಿಯಿಂದ ಮಾರ್ಚ್ 31 ರಂದು ವಿಶೇಷಚೇತನ ಮಕ್ಕಳ ಜೊತೆಗೆ ವಿನೂತನ ಹಾಗೂ ವಿಭಿನ್ನವಾಗಿ ಮಹಿಳಾ ದಿನಾಚರಣೆ ಮಾಡಲಾಗುವುದು ಎಂದು ಗುಜರಾತಿ ಮಹಿಳಾ ಮಂಡಳ ಅಧ್ಯಕ್ಷೆ ಭಕ್ತಿ ಠಕ್ಕರ್ ಹೇಳಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಬನ್ನೇರುಘಟ್ಟ
ಹೋಳಿ ಹಬ್ಬದ ಪ್ರಯುಕ್ತ ಗುಜರಾತ್ ಭವನದ ಆವರಣದಲ್ಲಿ ವಿಶೇಷವಾಗಿ ಕಾಮಣ್ಣನ ದಹನ ಮಾಡುವ ಮೂಲಕ ಪೂಜೆ ಪುನಸ್ಕಾರ ಸಲ್ಲಿಸಿದ ನಂತರ ಮಾಹಿತಿ ನೀಡಿದರು.
ಮಾನಸಿಕ ಅಸ್ವಸ್ಥ ಮಕ್ಕಳು, ಅಂಗವೈಕಲ್ಯ ಮಕ್ಕಳು ಅವರು ಉತ್ಪಾದನೆ ಮಾಡಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಸಹ ಹಮ್ಮಿಕೊಳ್ಳಲಾಗಿದೆ. ಇದರ ಬೆಂಬಲ ನೀಡಿ ಪ್ರೋತ್ಸಾಹಿಸಲು ಮನವಿ ಮಾಡಿದರು
ಶ್ರೀಮತಿ ಸುಧಾ ಆರ್ಎನ್ ಶೆಟ್ಟಿ ರೋಟರಿ ಶಾಲೆ ಮತ್ತು ಅಸಾಧಾರಣ ಮಕ್ಕಳಿಗಾಗಿ ಉಷಾಸ್ ಕೇಂದ್ರ ಸಹ ಸಹಯೋಗದಿಂದಿಗೆ ನಡೆಸಲಾಗುವುದು ಅಂದು ಸಂಜೆ 4.30 ರಿಂದ 8 ಗಂಟೆ ವರೆಗೂ ಗುಜರಾತ್ ಭವನದಲ್ಲಿ ನೆರವೇರಿಸಲಿದ್ದು ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಮೂಲಕ ವಿಶೇಷ ಮಕ್ಕಳನ್ನು ಬೆಂಬಲಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಶ್ರೀ ಗುಜರಾತಿ ಮಹಿಳಾ ಮಂಡಲ ಅಧ್ಯಕ್ಷರು ಭಕ್ತಿ ಠಕ್ಕರ್ ಹೇಳಿದರು.
ಹಾಗೂ ಉಪಾಧ್ಯಕ್ಷರಾದ ಮನಿಷಾ ಪಾಟೀಲ್ ಮತ್ತು ಕಾರ್ಯದರ್ಶಿಗಳಾದ ಹ್ಯಾಝೆಲ್ ಗೊರಾಡಿಯಾ, ಜಂಟಿ ಕಾರ್ಯಾದರ್ಶಿ ಸೋನಾಲ್ ಪಾಂಚಾಲ್, ಕೋಶಾಧಿಕಾರಿ ದೀಪ್ತಿ ಠಕ್ಕರ್ ಇದ್ದರು.