ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ ಜೋರಾಗಿ ನಡೆಯುತ್ತಿದೆ. ಈ ನಡುವೆ ಹಲವು ಕಾರಣಗಳಿಂದ ಬಿಜೆಪಿಯಿಂದ ದೂರವಾಗಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಸೋಮವಾರ (ಮಾ. 25) ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ಹೇಳಿವೆ. ಇನ್ನೂ ಈ ಸಂಬಂಧ ಕೆಆರ್ಪಿಪಿ ಪಕ್ಷದ ಪದಾಧಿಕಾರಿಗಳ ಸಭೆ ಕರೆದಿದ್ದರು.
ಬೆಂಗಳೂರಿನ ತಮ್ಮ ಪಾರಿಜಾತ ನಿವಾಸದಲ್ಲಿ ಕೆಆರ್ಪಿಪಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ರಾಜಕೀಯವಾಗಿ ನನಗೆ ಗಂಗಾವತಿ ಪುನರ್ಜನ್ಮ ಕೊಟ್ಟಿದೆ ಆದ್ದರಿಂದ ನನ್ನ ಕೊನೆ ಉಸಿರಿರೊವರೆಗೂ ಗಂಗಾವತಿ ಕ್ಷೇತ್ರವನ್ನ ಬಿಡಲ್ಲ. ಕಷ್ಟಕಾಲದಲ್ಲಿ ನಗಗೆ ಕ್ಷೇತ್ರದ ಜನರು ಕೈಹಿಡಿದಿದ್ದಾರೆ ಎಂದು ಗಂಗಾವತಿ ಕ್ಷೇತ್ರದ ಕುರಿತಂತೆ ರೆಡ್ಡಿ ಬಾವುಕರಾದರು.
ಇನ್ನೂ ಪಕ್ಷ ವಿಲೀನ ಮಾಡಿ ಬಿಜೆಪಿಗೆ ಸೇರಿ ಎಂದು ಹೇಳಿದ್ದಾರೆ. ಹೀಗಾಗಿ ತಮ್ಮ ಅಭಿಪ್ರಾಯ ಕೇಳಲು ಸಭೆ ಕರೆದಿದ್ದೇನೆ. ಮೋದಿಗಾಗಿ ನಾನು ಬಿಜೆಪಿ ಪಾರ್ಟಿಗೆ ನಮ್ಮ ಕೆಆರ್ಪಿಪಿ ಪಕ್ಷ ಬೆಂಬಲಿಸುತ್ತೆ ಎಂದಿದ್ದೆ ಆದರೆ ಅಮಿತ್ ಶಾ ಅವರು ನೀವು ಬರಲೇ ಬೇಕು ಎಂದಿದ್ದಾರೆ ಎಂದಾಗ ಸಭೆಯಲ್ಲಿ ಬಿಜೆಪಿ ಸೇರಲು ರೆಡ್ಡಿ ಆಪ್ತರು ಸಮ್ಮತಿಸಿದ್ದಾರೆಂದು ಮಾಹಿತಿ ದೊರಕಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಿಜೆಪಿ ಸೇರ್ಪಡೆ ಕುರಿತು ಮಾಹಿತಿ ಹಂಚಿಕೊಳ್ಳಿಲಿದ್ದಾರೆ.