ಕಲಬುರಗಿ: ಈ ಬಾರಿಯೂ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತ ಸನ್ನತಿಯ ಶಕ್ತಿಪೀಠದಲ್ಲಿ ಸಂಸದ ಡಾ.ಉಮೇಶ್ ಜಾಧವ್ ಸಂಕಲ್ಪ ಮಾಡಿದ್ದಾರೆ.. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಶಕ್ತಿಪೀಠದಲ್ಲಿ ಉಮೇಶ್ ಜಾಧವ್ ಸಂಕಲ್ಪ ಮಾಡಿದ್ದು,
ಶ್ರೀ ಚಂದ್ರಲಾಂಬೆಯ ಸನ್ನಿಧಿಯಲ್ಲಿ ಕುಳಿತು ಕುಂಕುಮಾರ್ಚನೆ ಸಲ್ಲಿಸಿ ಈ ಬಾರಿಯೂ ಗೆಲ್ಲಿಸುವಂತೆ ಪ್ರಾರ್ಥನೆ ಮಾಡಿದ್ದಾರೆ.. ದೇಶದ ಸಂರಕ್ಷಣೆ ಆಗಬೇಕು ಅಂದರೆ ಮೋದಿ ಪ್ರಧಾನಿ ಆಗಲೇಬೇಕು ಹೀಗಾಗಿ ತಮ್ಮನ್ನೂ ಮತ್ತೊಮ್ಮೆ ಗೆಲ್ಲಿಸಿ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಲು ಹರಸುವಂತೆ ದೇವಿಯಲ್ಲಿ ಬೇಡಿಕೊಂಡರು.