ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಾನೇ ಮೈತ್ರಿ ಅಭ್ಯರ್ಥಿ ಎಂದೇಳಿಕೊಳ್ಳುತ್ತಿದ್ದ ಸಂಸದೆ ಸುಮಲತಾಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರೋ ಹೈ ಕಮಾಂಡ್ ಸುಮಲತಾರನ್ನ ಸುಮ್ಮನಿರುವಂತೆ ಸೂಚಿಸಿದೆ. ಇದರಿಂದಾಗಿ ಸುಮಲತಾರ ಮುಂದಿನ ನಡೆ ಏನು ? ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಹಾಗಾದ್ರೆ ಸಂಸದೆ ಸುಮಲತಾ ತಟಸ್ಥರಾಗ್ತಾರಾ ? ಅಕಸ್ಮಾತ್ ಕಳೆದ ಬಾರಿಯಂತೆ ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗ್ತಾರಾ ? ಈ ಸ್ಟೋರಿ ನೋಡಿ ಎಲ್ಲಾ ಗೊತ್ತಾಗುತ್ತೆ.
ಹೌದು ಬಿಜೆಪಿ ಹೈಕಮಾಂಡ್ ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್ ಪ್ರಾಭಲ್ಯವಿರುವ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನೇ ನಿಲ್ಲಿಸಲು ಹಸಿರು ನಿಶಾನೆ ತೋರಿಸಿದೆ. ವಿಪರ್ಯಾಸವೆಂದರೆ ಈವರೆಗೂ ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಗೆ ಇದರಿಂದಾಗಿ ಬಿಗ್ ಶಾಕ್ ಆಗಿದೆ.
ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: 72 ಲಕ್ಷ ರೂ. ನ ಕ್ಯಾನ್ಸರ್ ಔಷಧ ಇನ್ಮುಂದೆ 3 ಲಕ್ಷಕ್ಕೆ ಸಿಗುತ್ತೆ
ಸಂಸದೆ ಸುಮಲತಾ ಬಿಜೆಪಿ ಟಿಕೆಟ್ ನನಗೇ ಸಿಗುತ್ತದೆ. ಕಮಲದ ಚಿಹ್ನೆ ಉಳಿಸುವುದೇ ನನ್ನ ಗುರಿ, ನಾನೇ ಅಭ್ಯರ್ಥಿ ಅಂತ ಹೇಳಿದ್ರು. ಅಲ್ಲದೆ, ಅವರ ಅಭಿಮಾನಿಗಳೂ ಕೂಡ ಮಂಡ್ಯದಿಂದ ಸುಮಲತಾ ಸ್ಪರ್ಧೆ ಖಚಿತ ಅಂತಾನೂ ಹೇಳಿದ್ರು. ಆದರೆ ಈಗ ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆ ಕೊಟ್ಟಿರೋದು ಸುಮಲತಾಗೆ ನುಂಗಲಾರದ ತುತ್ತಾಗಿದೆ.
ಆಶ್ಚರ್ಯವೆಂದರೆ ಹಾವು ಮುಂಗುಸಿ ತರ ಕಿತ್ತಾಡುತ್ತಿದ್ದ ಸುಮಲತಾ ಮತ್ತು ಜೆಡಿಎಸ್ಸಿಗರು ಮುಂದೆ ಒಂದಾಗ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಇತ್ತೀಚೆಗೆ ಮಂಡ್ಯದಲ್ಲಿ ಕಾರ್ಯಕರ್ತರ ಸಭೆ ನಡೆದಾಗ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರು ನನ್ನ ಅಕ್ಕ ಇದ್ದಾಗೆ ಅಂತೇಳಿದ್ರೆ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಅವರು ನನ್ನ ತಾಯಿ ಸಮಾನ ಅಂತೇಳೋ ಮೂಲಕ ಸುಮಲತಾರನ್ನ ಓಲೈಸಿಕೊಳ್ಳಲು ಮುಂದಾಗಿದ್ದಾರೆ. ಆದ್ರೆ ಸುಮಲತಾ ಅವರು ಈವರೆಗೂ ತಮ್ಮ ಮುಂದಿನ ನಡೆ ಏನು ಎಂಬುದನ್ನು ಬಾಯಿ ಬಿಟ್ಟಿಲ್ಲ.
ಒಟ್ಟಾರೆ, ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್ ನವರೇ ಎಂಬುದು ಖಚಿತವಾದಂತಾಗಿದೆ. ಇನ್ನು ಮಂಡ್ಯದಿಂದಲೇ ನನ್ನ ಸ್ಪರ್ಧೆ, ಮಂಡ್ಯ ಬಿಟ್ಟು ಎಲ್ಲೂ ಹೋಗಲ್ಲ ಅಂತ ಹೇಳುತ್ತಿದ್ದ ಸಂಸದೆ ಸುಮಲತಾ ಏನು ಮಾಡ್ತಾರೆ ಅನ್ನೋದು ಮಾತ್ರ ನಿಗೂಢ. ಅಕಸ್ಮಾತ್ ಸುಮಲತಾ ತಟಸ್ಥರಾಗ್ತಾರಾ ? ಅಥವಾ ಪಕ್ಷೇತರರಾಗಿ ನಿಲ್ತಾರಾ ? ಇಲ್ಲ ಜೆಡಿಎಸ್ ಅಭ್ಯರ್ಥಿಗೆ ಸಪೋರ್ಟ್ ಮಾಡ್ತಾರಾ ? ಕಾದು ನೋಡಬೇಕಿದೆ.