ನೆಲಮಂಗಲ: ಆ ಊರಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ , ಅ ಜಾತ್ರೆಯ ಶನಿಮಹಾತ್ಮ ಜಾತ್ರೆಯಾಗಿದ್ದು ಅಲ್ಲಿನ ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಲ್ಲಿ ಅಂತಿರಾ ಅ ದೇವಸ್ಥಾನ ಈ ಸ್ಟೋರಿ ನೋಡಿ .
ದೇವಾಲಯದಲ್ಲಿ ಬಗೆ ಬಗೆಯ ಹೂಗಳಿಂದ ಅಲಂಕಾರ, ಕಂಗೊಳಿಸುತ್ತಿರುವ ಶನಿಮಹಾತ್ಮ ವಿಗ್ರಹ, ಆರತಿ ಹೊತ್ತು ಸಾಗುತ್ತಿರುವ ಮಹಿಳೆಯರು, ಭಕ್ತಿಯ ಪರಾಕರ್ಶೆಯಲ್ಲಿ ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತಿರಿವ ಭಕ್ತರು, ಈ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಉತ್ತರ ತಾಲೂಕು ಕೆಂಗನಹಳ್ಳಿ ಗ್ರಾಮದಲ್ಲಿ. ಹೌದು ಕೆಂಗನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಶಕೊಮ್ಮೆ ಶನಿದೇವರ ಜಾತ್ರೆಯನ್ನು ಮಾಡುತ್ತಾರೆ . ದೇವಸ್ಥಾನಕ್ಕೆ ದೀಪಾಲಂಕಾರ ಮಾಡಿ ಜಾತ್ರೆಗೆ ಮೆರಗು ತಂದಿದ್ದರು.
ಹೌದು ಕೆಂಗನಹಳ್ಳಿಯಲ್ಲಿ ಆದಿ ಶಕ್ತಿ ಮಾರಮ್ಮ, ಚನ್ನಕೇಶವ, ಅಂಚನೇಯ ಸ್ವಾಮಿ ದೇವರ ಅದ್ದೂರಿ ಜಾತ್ರೆ ನಡೆಯುತ್ತದೆ ಅದರಲ್ಲಿ ವಿಶೇಷವಾಗಿ ಪ್ರತಿ ವರ್ಷ ಶನಿಮಹಾತ್ಮ ದೇವರ ಜಾತ್ರ ಮಹೋತ್ಸವ ಜರುಗಿತು. ವಿಶೇಷವಾಗಿ ಶನಿಮಹಾತ್ಮ ದೇವರ ಅತ್ತಿರ ಬಂದು ಇಲ್ಲಿ ಬೇಡಿಕೊಂಡರೆ ಸಂತಾನ ಭಾಗ್ಯ ಕರುಣಿಸೋ ಉದ್ಯೋಗ ಇಲ್ಲದವರಿಗೆ ಉದ್ಯೋಗ ಸಿಗುತ್ತದೆ ಮದುವೆ ಹಾಗದವರಿಗೆ ಮದುವೆ ಹಾಗುತ್ತದೆ ಎಂದು ಸುತ್ತಮುತ್ತಲ್ಲ ಹತ್ತು ಹಳ್ಳಿಯಲ್ಲಿ ಪ್ರಸಿದ್ದಿಯಾಗಿದ್ದು, ಹಲವಾರು ಮಹಿಳೆಯರು ಬಂದು ತಮ್ಮ ಇಷ್ಟ ದೈವ ಶನಿಮಹಾತ್ಮನಿಗೆ ಆರತಿ ಪೂಜೆ ಸಲ್ಲಿಸಿ, ಭಕ್ತಿ ಭಾವದಿಂದ ಪೂಜೆ ಕೈಗೊಂಡು ಪುನೀತರಾದರು.
ಒಟ್ಟಾರೆ ಕೆಂಗನಹಳ್ಳಿಯಲ್ಲಿ ಪ್ರತಿ ವರ್ಷ ನದೆಯುವ ಶನಿಮಹಾತ್ಮ ದೇವರ ಜಾತ್ರೆ ವಿಶೇಷವಾಗಿತ್ತು.ಅಷ್ಟೆ ಅಲ್ಲದೆ ಜಾತ್ರೆ ಸಮಯದಲ್ಲಿ ರಾಜಸತ್ಯವ್ರತ ಅಥವಾ ಶನಿಪ್ರಭಾವ ಎಂಬ ಪೌರಣಿಕ ನಾಟಕ ಮಾಡುತ್ತಾರೆ ಗ್ರಾಮದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ದೇವರ ಕೃಪೆಗೆ ಪಾತ್ರರಾಗಿದ್ದಾರೆ.