ಬೆಂಗಳೂರು: ಲೋಕಸಭಾ ಟಿಕೆಟ್ ಘೋಷಣೆಯಾದ್ಮೇಲೆ ರಾಜ್ಯ ಬಿಜೆಪಿಯಲ್ಲಿ ಬುಗಿಲೆದ್ದಿರುವ ಬಂಡಾಯದ ಬಾವುಟ ಸದ್ಯಕ್ಕೆ ತಣ್ಣಗಾಗುವಂತೆ ಕಾಣ್ತಿಲ್ಲ. ಅಸಮಾಧಾನ ಶಮನಕ್ಕೆ ಮಾಜಿ ಸಿಎಂ ಯಡಿಯೂರಪ್ಪರೇ ಅಖಾಡಕ್ಕಿಳಿದ್ರು ನೋ ರೆಸ್ಪಾನ್ಸ್. ಮಾಧುಸ್ವಾಮಿ, ಈಶ್ವರಪ್ಪ, ಕರಡಿ ಸಂಗಣ್ಣ, ಸದಾನಂದಗೌಡರ ಅಸಮಾಧಾನ ಕಡಿಮೆಯಾಗೋ ಸಾಧ್ಯತೆಗಳೇ ಕಾಣ್ತಿಲ್ಲ. ಯಡಿಯೂರಪ್ಪ ಪ್ಯಾಮಿಲಿ ವಿರುದ್ಧ ಹೆಚ್ಚಾಗ್ತಿರುವ ಆಕ್ರೋಶದ ಕಿಚ್ಚು ಪಕ್ಷಕ್ಕೆ ಡ್ಯಾಮೇಜ್ ಮಾಡ್ತಿದ್ದು, ಮೈತ್ರಿಯ ಕಗ್ಗಂಟು, 5 ಕ್ಷೇತ್ರಗಳ ಟಿಕೆಟ್ ಗೊಂದಲ ಕೇಸರಿ ಟೀಂಗೆ ಕಗ್ಗಂಟಾಗಿದೆ….
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶುರುವಾದ ಬಿಜೆಪಿಯ ಬಂಡಾಯ ಇದೀಗ ಲೋಕಸಭಾ ಚುನಾವಣೆಯಲ್ಲೂ ಜೋರಾಗಿದೆ. ಲೋಕಸಭಾ ಟಿಕೆಟ್ ಘೋಷಣೆಯಾದ್ಮೇಲೆ ಬಿಜೆಪಿಯ ಹಲವು ನಾಯಕರು ಪಕ್ಷದ ವಿರುದ್ಧವೇ ಅಸಮಾಧಾನ ಸ್ಪೋಟಿಸಿದ್ದಾರೆ, ಮಾಜಿ ಸಚಿವರಾದ ಈಶ್ವರಪ್ಪ, ಮಾಧುಸ್ವಾಮಿ, ಸಂಸದ ಕರಡಿ ಸಂಗಣ್ಣ, ಮಾಜಿ ಸಿಎಂ ಸದಾನಂದಗೌಡ ಬಂಡಾಯದ ಭಾವುಟ ಹಾರಿಸಿದ್ದು ಎಲ್ಲರಿಗೂ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬವೇ ಟಾರ್ಗೆಟ್ ಆಗಿದೆ.
ಮಾಜಿ ಸಚಿವ ಮಾಧುಸ್ವಾಮಿ ಬಂಡಾಯ ಶಮನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕಿಳಿದಿದ್ದಾರೆ ತುರುವೇಕೆರೆ ಶಾಸಕ ಮಸಾಲ ಜಯರಾಂ ತೋಟದ ಮನೆಯಲ್ಲಿ ಮಾಧಸ್ವಾಮಿ ಜೊತೆ 20 ನಿಮಿಷಗಳ ಗೌಪ್ಯ ಮಾತುಕತೆ ನಡೆಸಿದ್ರು ಯಡಿಯೂರಪ್ಪ. ಮಾಧುಸ್ವಾಮಿ ಗೊಂದಲದಲ್ಲಿ ಇದ್ದರು ನಾನು ಬಂದು ಮಾತನಾಡಿದ್ದೇನೆ
ಮುಂದೆ ಮಾಧುಸ್ವಾಮಿಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ.ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಿಲ್ಲಾ ಖುಷಿಯಾಗಿದ್ದಾರೆ. ಎಲ್ಲಾ ಸಮಸ್ಯೆ ಬಗೆಹರಿದಿದೆ ಸೋಮಣ್ಣ ಪರ ಕೆಲಸ ಮಾಡೋದು ಅವರಿಗೆ ಬಿಟ್ಟಿದ್ದು, ಟಿಕೆಟ್ ಕೊಟ್ಟಿದ್ದು ರಾಷ್ಟ್ರೀಯ ನಾಯಕರು ನಾನು ಕೊಟ್ಟಿಲ್ಲ ಎಂದ್ರು ಯಡಿಯೂರಪ್ಪ….
ಸಭೆ ಬಳಿಕ ಮಾತನಾಡಿದ ಮಾಧುಸ್ವಾಮಿ ಯಡಿಯೂರಪ್ಪರನ್ನ ಬೆಂಬಲಿಸಿ ಜೆಡಿಯು ಬಿಟ್ಟು ಬಿಜೆಪಿಗೆ ಬಂದವನು ನಾನು. ಯಡಿಯೂರಪ್ಪ ಹೇಳಿದಕ್ಕೆ ನಾನು ಚುನಾವಣೆಗೆ ರೆಡಿಯಾಗಿದ್ದೆ , ಯಡಿಯೂರಪ್ಪ ಪಕ್ಷ ಬಿಡೊದು ಬೇಡ ಅಂದಿದ್ದಾರೆ ಆಯ್ತು ಎಂದಿದ್ದೇನೆ.ಸೋಮಣ್ಣರಿಗೆ ಬೆಂಬಲ ಕೊಡೋ ಬಗ್ಗೆ ಚಿಂತಿಸಿಲ್ಲ
ನನ್ನ ಒಂದು ವೋಟ್ ನಲ್ಲಿ ಏನಾಗುತ್ತೆ ಬಿಡಿ ಎನ್ನೊ ಮೂಲಕ ಸೋಮಣ್ಣ ಗೆ ಟಾಂಗ್ ಕೊಟ್ರು ಮಾಧುಸ್ವಾಮಿ..
ಕೊಪ್ಪಳ ಸಂಸದ ಕರಡಿ ಸಂಗಣ್ಣ ಮನವೊಲಿಸಲು ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ರು. ಭೇಟಿ ನಂತರ ಮಾತನಾಡಿದ ರವಿಕುಮಾರ್ ಕರಡಿ ಸಂಗಣ್ಣ ಅವರ ಜೊತೆಗಿನ ಮಾತುಕತೆ ಫಲಪ್ರದವಾಗಿದೆ.
ಇನ್ನೆರಡು ಮೂರು ದಿನಗಳಲ್ಲಿ ಅವರು ಆ್ಯಕ್ಟಿವ್ ಆಗ್ತಾರೆ ಅವರು ಪಕ್ಷ ಬಿಡಲ್ಲ ಬಂಡಾಯ ಅಭ್ಯರ್ಥಿ ಯಾಗಿ ಸ್ಪರ್ಧಿಸಲ್ಲ ಎಂದ್ರು ಆದ್ರೆ ಸಂಗಣ್ಣ ಮಾತ್ರ ಯಾವುದೇ ರಿಯಾಕ್ಷನ್ ಕೊಡದೆ ತಮ್ಮ ಅಸಮಾಧಾನ ಮುಂದುವರೆಸಿದ್ದಾರೆ…..
ಮಾಜಿ ಸಚಿವ ಈಶ್ವರಪ್ಪ ನವರ ಬಂಡಾಯದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ
ವರಿಷ್ಠರು ಈಶ್ವರಪ್ಪನವರ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರೆ ಅನ್ನಿ ವಿಶ್ವಾಸವಿದೆ. ಪಕ್ಷ ಕಟ್ಟಿದವರಿಗೆ ಟಿಕೆಟ್ ಕೈತಪ್ಪದ್ರೆ ನೋವಾಗೋದು ಸಹಜ
ಆದರೆ ಪಕ್ಷದ ಮೇಲಿರುವ ಪ್ರೀತಿಯಿಂದಾಗಿ ಪಕ್ಷದ ಪರ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದ್ರು ಮಾಜಿ ಸಿಎಂ…
ಈ ಮಧ್ಯೆ ಮೈತ್ರಿಯ ಟಿಕೆಟ್ ಹಂಚಿಕೆ ಗೊಂದಲ ಮುಂಸುವರೆಯುತ್ತಲೇ ಇದ್ದು ಜೆಡಿಎಸ್ ಗೆ ಕೋಲಾರ ಬಿಟ್ಟುಕೊಡಲು ಕಮಲ ನಾಯಕರು ಒಪ್ತಿಲ್ಲ. ಚಿಕ್ಕಬಳ್ಳಾಪುರ ದಲ್ಲಿ ಮಾಜಿ ಸಚಿವ ಸುಧಾಕರ್ ಶಾಸಕ ವಿಶ್ವನಾಥ್ ಪುತ್ರ ಅಲೋಕ್ ನಡುವಿನ ಗೊಂದಲ ಮುಂದುವರೆದ್ರೆ. ರಾಯಚೂರಲ್ಲಿ ಹೊಸ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಕೊಡಬೇಕಾ ಬೇಡ್ವಾ ಎಂಬ ಜಟಾಪಟಿ ಮುಂದುವರೆದಿದೆ. ಬೆಳಗಾವಿ ಜಗದೀಶ್ ಶೆಟ್ಟರ್ ಗೆ ಕ್ಲಿಯರ್ ಆಗಿದ್ರು ಸ್ಥಳೀಯ ಅಸಮಾಧಾನದ ಹೊಗೆಯಾಡ್ತಿದೆ. ಚಿಕ್ಕಬಳ್ಳಾಪುರ ಟಿಕೆಟ್ ಬಗ್ಗೆ ಮಾತನಾಡಿದ ಶಾಸಕ ವಿಶ್ವನಾಥ್ ಸರ್ವೇ ಪ್ರಕಾರ ಅಲೋಕ್ ಗೆ ಟಿಕೇಟ್ ನಿಡಿದ್ರೆ ಗೆಲುವು ನಿಶ್ಚಿತ.
ಸುಧಾಕರ್ ಚುನಾವಣೆಯಲ್ಲಿ ಸೋತ ನಂತರ ಜನರ ಸಂಪರ್ಕ ಕಡಿಮೆ ಮಾಡಿದ್ದಾರೆ ಉಸ್ತುವಾರಿ ಸಚಿವರಾಗಿದ್ದಾಗ ಜನರ ಕೈಗೆ ಸಿಕ್ಕಿಲ್ಲ, ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಿಲ್ಲ. ಜೆಡಿಎಸ್ ನವರು ಸೇರಿದಂತೆ ನಮ್ಮ ಪಕ್ಷದ ಮುಖಂಡರು ಸುಧಾಕರ್ ಗೆ ವಿರೊಧ ವ್ಯಕ್ತಪಡಿಸ್ತಿದ್ದಾರೆ ಎಲ್ಲರೂ ಬೆಂಬಲಿಸುವ ಅಲೋಕ್ ಗೆ ಟಿಕೆಟ್ ಕೊಡೋದು ಸೂಕ್ತ ಎಂದು ಪುತ್ರನ ಪರ ಬ್ಯಾಟ್ ಬೀಸಿದ್ದಾರೆ ವಿಶ್ವನಾಥ್….
ಒಟ್ನಲ್ಲಿ ಬಿಜೆಪಿಯ ಅಸಮಾಧಾನ ಬೇಗುದಿ ಕಮಲಪಡೆಗೆ ಬೆಂಬಿಡದೆ ಕಾಡ್ತಿದೆ, ಯಡಿಯೂರಪ್ಪ ಪ್ಯಾಮಿಲಿ ವಿರುದ್ಧದ ಬಂಡಾಯದ ಬಾವುಟ ಸದ್ಯಕ್ಕಂತೂ ತಣ್ಣಗಾಗೋದು ಡೌಟ್ ಎನ್ನುವಂತಾಗಿದೆ. ಈ ಮಧ್ಯೆ ಮೈತ್ರಿ ಟಿಕೆಟ್ ಹಂಚಿಕೆ , 5 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಗೊಂದಲ ಬಿಜೆಪಿ ಹೈಕಮಾಂಡ್ ಗೆ ತಲೆನೋವಾಗಿದೆ...