ಗಂಗಾವತಿ : ನಗರದ ಹೃದಯ ಭಾಗವಾದ ಗುಂಡಮ್ಮಕ್ಯಾಂಪ್ ನಲ್ಲಿ ಜನ ವಸತಿ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಖಾಸಗಿ ಗ್ಯಾಸ್ ಕಂಪನಿಯು ಗೋದಾಮು ಮಾಡಿಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಸಾವಿರಾರು ಸಿಲಿಂಡರ್ ಗಳನ್ನು ಅಕ್ರಮ ದಾಸ್ತಾನು ಮಾಡುತ್ತಿರುವುದು ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾದರು ಕ್ಯಾರೆ ಎನ್ನದ ಜಿಲ್ಲಾಡಳಿತ ಎಂದು ಅರೋಪ ಕೇಳಿ ಬಂದಿದೆ.
ಈ ವಿಷಯಕ್ಕೆ ಸ್ಪಂದಿಸಿದ ನಗರಸಭೆ ಪೌರಾಯುಕ್ತರು ತಕ್ಷಣವೇ ಕ್ರಮ ಕೈಗೊಂಡು ನೋಟಿಸ್ ಜಾರಿ ಮಾಡಿ 24 ಗಂಟೆಯೊಳಗೆ ತೆರವುಗೊಳಿಸಲು ಖಡಕ್ ಆದೇಶ ನೀಡಿದ್ದು ಸಾರ್ವಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ. ವಾಸ್ತವದಲ್ಲಿ ಜನವಸತಿ ಪ್ರದೇಶದಲ್ಲಿ ಸ್ಫೋಟಕ ಸಾಮಾಗ್ರಿಗಳನ್ನು ದಾಸ್ತಾನು ಮಾಡುವಂತಿಲ್ಲ. ಆಕಸ್ಮಿಕ ಏನಾದರೂ ಬೆಂಕಿ ಅವಘಡ ಸಂಭವಿಸಿದರೆ ಅಪಾರ ಪ್ರಮಾಣ ಸಾವು ನೋವು ಜೀವ ಹಾನಿಯುಂಟಾಗಲಿದೆ.
ಸಂಬಂಧಿತ ಆಹಾರ ಮತ್ತು ಸರಬರಾಜು ಇಲಾಖೆಗೆ ಈ ವಿಷಯ ಗಮನಕ್ಕೆ ಬಂದರೂ ಅಧಿಕಾರಿಗಳು ಗ್ಯಾಸ್ ಕಂಪನಿಯವರ ಜೊತೆ ಶಾಮೀಲು ಆಗಿರುವ ಅನುಮಾನ ಗಳು ಎದ್ದು ಕಾಣುತ್ತಿವೆ. ಈ ಗೋದಾಮು ತೆರವುಗೊಳಿಸಲು ಸ್ಥಳೀಯರು ಹಾಗು ಬಿಜೆಪಿ ಮುಖಂಡ ಅಮರಜ್ಯೋತಿ ವೆಂಕಟೇಶ್ ಅಗ್ರಹಿಸಿದ್ದರು.