ದಾವಣಗೆರೆ:- ಪ್ರಜ್ಞಾವಂತ ಮತದಾರರು ಆಲೋಚನೆ ಮಾಡಿ ಮತ ನೀಡಿ ಎಂದು ದಾವಣಗೆರೆಯ ಲೋಕಸಭಾ ಕೈ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದ್ದಾರೆ.
ಈ ಸಂಬಂಧ ದಾವಣಗೆರೆಯಲ್ಲಿ ಮಾತನಾಡಿದ ಅವರು, ನಾವೇನು ಟೀಕೆಟ್ ನಮಗೆ ಬೇಕು ಅಂತ ಕೇಳಿಲ್ಲ. ಶಾಸಕರು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯದ ಮೇಲೆ ಕೊಟ್ಟಿದ್ದಾರೆ. ಮೇಲಾಗಿ ಯಾವತ್ತು ನಾನೇ ಕ್ಯಾಂಡಿಡೇಟ್ ಅಂತ ಹೇಳಿಲ್ಲ. ಪೋಲಿಂಗ್ ಮಾಡಿದ್ದರ ಮೇಲೆ ಸ್ಟ್ರಾಂಗ್ ಕ್ಯಾಂಡಿಡೇಟ್ ನೋಡಿ ಕೊಟ್ಟಿದ್ದಾರೆ ಎಂದರು.
ಯಾರೇ ಇದ್ದರೂ ಕಾಂಪಿಟೇಷನ್ ಇದ್ದೆ ಇರತ್ತೆ. ಹಳಬರೆ ಇರಲಿ, ಹೊಸಬರೇ ಇರಲಿ. ನಾವು ಅಭಿವೃದ್ಧಿ ಮೇಲೆ ಓಟ್ ಕೇಳುತ್ತೇವೆ. ಪ್ರಜ್ಞಾವಂತ ಮತದಾರರು ಆಲೋಚನೆ ಮಾಡಿ ಮತ ನೀಡಬೇಕು. ಜಿಲ್ಲೆಯಲ್ಲಿ ಏಳು ಕಾಂಗ್ರೆಸ್ ಶಾಸಕರಿದ್ದಾರೆ. ಸದ್ಯದಲ್ಲಿಯೇ ಶಾಸಕರ ಸಭೆ ಕರೆದು ಸ್ಟ್ರಾಟಜಿ ರೂಪಿಸುತ್ತೇವೆ. ನಾವು ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡುತ್ತೇವೆ. ಜನರಿಗೆ ಹೆಚ್ಚಿನ ಸಮಯ ನೀಡಿ ಜನರ ಅಹವಾಲು ಆಲಿಸುತ್ತೇವೆ. ಇದರಲ್ಲಿ ಒಂದೇ ಫ್ಯಾಮಿಲಿಗೆ ಟಿಕೆಟ್ ನೀಡಿರುವ ಪ್ರಶ್ನೆ ಇಲ್ಲ ಎಂದು ದಾವಣಗೆರೆಯಲ್ಲಿ ಕೈ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಹೇಳಿಕೆ ನೀಡಿದ್ದಾರೆ.