ಶಿವಮೊಗ್ಗ:- ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಆಯನೂರು ಮಂಜುನಾಥ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ.
ಈ ಸಂಬಂಧ ಇಂದು ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಅಯನೂರ್ ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಿನ್ನೆ ಸಂಜೆ ರಾಜ್ಯದ ನಾಯಕರು ಹಾಗೂ ಅಖಿಲ ಭಾರತದ ಕಾಂಗ್ರೆಸ್ ಆಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ನನ್ನನ್ನು ನೈರುತ್ಯ ಪದವೀದರ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.
5 ಜಿಲ್ಲೆಯ ಉಸ್ತುವಾರಿ ಸಚಿವರ ಅಭಿಪ್ರಾಯ ಪಡೆದ ನಂತರ ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದಾರೆ ಅವರಿಗೆಲ್ಲ ಅಭಿನಂದನೆಗಳು. ನೈರುತ್ಯ ಪದವೀದರರ ಸೋಲಿಲ್ಲದ ಕ್ಷೇತ್ರದಲ್ಲಿ 42 ವರ್ಷ ಸೋಲಿಲ್ಲದೆ ಮೆರೆಯುತ್ತಿರುವ ಬಿಜೆಪಿಯನ್ನು ನಾವು ಈ ಬಾರಿ ಸೋಲಿಸಿ ಆ ಸ್ಥಾನವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ. ನನ್ನ ಬದಲು ಬೇರೆಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದರೂ ಇದೆ ನನ್ನ ಅಭಿಪ್ರಾಯ ವಾಗಿರುತ್ತಿತ್ತು. ಮೊನ್ನೆ ಶಿವಮೊಗ್ಗ ಕ್ಕೆ ಬಂದ ಗೀತಾ ಶಿವರಾಜ್ ಕುಮಾರ್ ಅವರಿಗೆ ಅಧ್ಬುತ ಸ್ವಾಗತವನ್ನು ಕೊರಿದ್ದೇವೆ. ಖಂಡಿತವಾಗಿ ಸಹೋದರಿ ಗೀತಾ ಅವರನ್ನು ಪಾರ್ಲಿಮೆಂಟ್ ಗೆ ಆಯ್ಕೆ ಮಾಡಿ ಕಳುಹಿಸುತ್ತೇವೆ. ಅವರ ತಂದೆ ಮಾಡಿದ ಒಳ್ಳೆಯ ಕೆಲಸ ಅವರನ್ನು ಗೆಲ್ಲಿಸುತ್ತದೆ. ಲೋಕಸಭಾ ಚುನಾವಣೆ ಪಲಿತಾಂಶ ಬಂದ ನಂತರ ಜೂನ್ 25 ಕೆ ಪದವೀ ದರರ ಚುನಾವಣೆ ನಡೆಯಲಿದೆ ಎಂದರು.