ಮಾಗಡಿ :- ತಾಲೂಕಿನ ಕುರಿಲಿಂಗಯ್ಯನದೊಡ್ಡಿ ಗ್ರಾಮಕ್ಕೆ ಸುಸಜ್ಜಿತ ರಸ್ತೆ ಇಲ್ಲದೇ ದಿನನಿತ್ಯ ಗ್ರಾಮಕ್ಕೆ ಹೋಗಲು ಪರದಾಡುವ ಸ್ಥಿತಿ ಎದುರಾಗಿದ್ದು ರಸ್ತೆ ಅಭಿವೃದ್ಧಿ ಮಾಡದಿದ್ದರೆ ಮತದಾನ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಮಾಗಡಿ ತಾಲೂಕಿನ ಅಜ್ಜಹಳ್ಳಿ ಗ್ರಾಮಪಂಚಾಯಿತಿಯ ಮತ್ತ ಗ್ರಾಮದಿಂದ ಕುರಿಲಿಂಗಯ್ಯನದೊಡ್ಡಿಗೆ ಹೋಗಲು ರಸ್ತೆ ಇದ್ದು ಆ ರಸ್ತೆ ಅಭಿವೃದ್ಧಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ಗ್ರಾಮಕ್ಕೆ ಓಡಾಡಲು ಜನರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ. ಸ್ಥಳೀಯ ಸರಕಾರದಿಂದ ಗ್ರಾಮದ ಒಳಗಿನ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಆದರೆ ಗ್ರಾಮಕ್ಕೆ ಸಂಪರ್ಕ ಸಲ್ಲಿಸುವ ಮುಖ್ಯ ರಸ್ತೆ ಅಭಿವೃದ್ಧಿ ಮಾಡಿಲ್ಲ, ಅನೇಕ ಬಾರಿ ಮನವಿ ಸಲ್ಲಿಸಿದರು ಮನವಿಗೆ ಅಧಿಕಾರಿಗಳು ಸ್ಪಂದನೆ ನೀಡದೆ ನಿರ್ಲಕ್ಷ್ಯ ಮಾಡಿದ್ದು ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ಹೋಗಲು, ಆಸ್ಪತ್ರೆಗೆ ಹೋಗಲು, ಕೃಷಿ ಮಾರುಕಟ್ಟೆಗಳಿಗೆ ಹೋಗಲು ಸಂಕಷ್ಟ ಎದುರಾಗಿದೆ.
ಶೀಘ್ರದಲ್ಲಿ ಅಧಿಕಾರಿಗಳು ಸ್ಥಳಪರಿಶೀಲನೆ ಮಾಡಿ ರಸ್ತೆ ಅಭಿವೃದ್ಧಿ ಮಾಡದಿದ್ದರೆ ನಮ್ಮ ಗ್ರಾಮದ ಜನರು ಮತದಾನ ಮಾಡದೇ ಸುಮ್ಮನಾಗುತ್ತೆವೆ, ನಮ್ಮ ಹಕ್ಕು ನೀಡಿ ನಮ್ಮ ಹಕ್ಕು ಚಲಾಹಿಸಲು ಅವಕಾಶ ಮಾಡಿಕೊಡಿ ,ಈಗಲೂ ಸ್ಪಂದಿಸದಿದ್ದರೆ ಬಹಿಷ್ಕಾರ ಒಂದೇ ದಾರಿಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ