ಬೆಂಗಳೂರು: ಬೇಸಿಗೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕ ಬೆಂಗಳೂರು ನಗರವಾಸಿಗಳಿಗೆ ಎದುರಾಗಿದೆ.
ವಿಜಯನಗರ ವಿಧಾನಸಭಾಕ್ಷೇತ್ರದ ಬಾಪೂಜಿನಗರಕ್ಕೆ ಜಲಕ್ಷಾಮ ಉಂಟಾಗಿದ್ದು ನೀರಿಲ್ಲದೇ ಕಂಗಾಲಾದ ಬಾಪೂಜಿನಗರ ನಿವಾಸಿಗಳು ವಾರಕ್ಕೊಮ್ಮೆ ಬರೋ ನೀರಿಗೆ ಕಾದು ಸುಸ್ತಾದ ಜನರು
ನಲ್ಲಿಯಲ್ಲಿ ಬರೋ ನೀರು ಸರಿಯಾಗಿ ಸಿಗದೇ ಜನರು ಹೈರಾಣು ಅತ್ತ ಟ್ಯಾಂಕರ್ ಗಳು ಸಿಗದೇ ಕಂಗೆಟ್ಟ ನಿವಾಸಿಗಳು ಬೋರ್ ವೆಲ್ ನೀರು, ಕಾವೇರಿ ನೀರಿಗೂ ಹಾಹಾಕಾರ ರಾತ್ರಿ ವೇಳೆ ನೀರು ಬಿಡೋದರಿಂದ ನೀರು ಹಿಡಿಯಲು ಸಂಕಷ್ಟ ನಮಗೆ ನೀರು ಕೊಡಿ ಅಂತಾ ನಿವಾಸಿಗಳ ಅಳಲು ತೋಡಿಕೊಂಡಿದ್ದಾರೆ.