ಬೆಂಗಳೂರು: ಟ್ರಾಫಿಕ್ ಕಾನ್ಸ್ ಟೇಬಲ್ ಗೆ ಬೈಕ್ ಸವಾರನಿಂದ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಘಟನೆ ಸದಾಶಿನಗರ ಠಾಣಾ ವ್ಯಾಪ್ತಿಯ ಪಿ.ಎಸ್.ಜಂಕ್ಷನ್ ನಲ್ಲಿ ನಡೆದಿದೆ.
BIGG BREAKING: ಮೆಟ್ರೋ ಟ್ರ್ಯಾಕ್ʼನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ: ವೈಟ್ ಫೀಲ್ಡ್- ಚಲ್ಲಘಟ್ಟ ಸಂಚಾರ ಸ್ಥಗಿತ!
ರಾತ್ರಿ 8.30ರ ಸುಮಾರಿಗೆ ಸಿಗ್ನಲ್ ಜಂಪ್ ಮಾಡಿ ಕಾನ್ಸ್ ಟೇಬಲ್ ನಿಂತಿದ್ದ ಐಲ್ಯಾಂಡ್ ಬಳಿ ಬಂದ ಆಕ್ಟಿವ್ ಬೈಕ್ ಸವಾರ ಪ್ರತೀಕ್ ಸಿಗ್ನಲ್ ಸರಿಯಾಗಿ ಕೊಡುವುದಕ್ಕೆ ಆಗೋದಿಲ್ಲ ಎಂದು ಜಗಳ ತೆಗೆದ ಬೈಕ್ ಸವಾರ ಈ ವೇಳೆ ಜಗಳ ಬೇಡ ಎಂದು ಪ್ರತಿಕ್ ನನ್ನ ಸಮಾಧಾನ ಮಾಡುತ್ತಿದ್ದ ಜೊತೆಗಿದ್ದ ಯುವತಿ ಆದರೂ ಕಾನ್ಸ್ಟೇಬಲ್ ಶಿವರಾಜ್ ಗೆ ಅವಾಚ್ಯವಾಗಿ ನಿಂದಿಸಿ ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದ ಪ್ರತೀಕ್
ಆತನನ್ನು ಹಿಡಿಯಲು ಪ್ರಯತ್ನಿಸಿದ ಕಾನ್ಸ್ಟೇಬಲ್ ಗೆ ಕೈಯಿಂದ ಹೊಡೆದು ಹಲ್ಲೆ ಬಳಿಕ ಎಸ್ಕೇಪ್ ಆಗ್ತಿದ್ದ ಪ್ರತೀಕ್ ನನ್ನ ಹಿಡಿದ ಕೋಬ್ರಾ ಸಿಬ್ಬಂದಿ ಮತ್ತು ಸಾರ್ವಜನಿಕರು ಈ ಬಗ್ಗೆ FIR ದಾಖಲಿಸಿ ಆರೋಪಿ ಪ್ರತೀಕ್ ನನ್ನ ಬಂಧಿಸಿದ ಸದಾಶಿವನಗರ ಪೊಲೀಸರು