ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಈ ಎರಡು ಪಕ್ಷಗಳು ಒಂದೂಗೂಡಿ ಕಾರ್ಯನಿರ್ವಹಿಸುತ್ತಿದ್ದು ಇಂದು ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ ಆಗಮಿಸಿದ್ದಾರೆ
ನಗರದ ಧವಳಗಿರಿ ನಿವಾಸದಲ್ಲಿ ಯಡಿಯೂರಪ್ಪ ರನ್ನ ಭೇಟಿಯಾದ ರೇವಣ್ಣ, ಪ್ರಜ್ವಲ್.. ಮುಂದಿನ ಲೋಕಸಭಾ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಪುತ್ರ ವಿಜಯೇಂದ್ರ ಕೂಡ ಉಪಸ್ಥಿತಿ ಇದ್ದು ಇವರು ಕೂಡ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ
ಆ ನಂತರ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಇವತ್ತು ಯಡಿಯೂರಪ್ಪ ಸಾಹೇಬ್ರು ಮತ್ತು ವಿಜಯೇಂದ್ರನ್ನ ಭೇಟಿ ಮಾಡಿದ್ದೇನೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದೇನೆ ಹಾಸನದ ಚುನಾವಣಾ ಪ್ರಚಾರಕ್ಕೆ ತಾವು ಬರಬೇಕು ಎಂದು ಕೇಳಿಕೊಂಡಿದ್ದೇನೆ ಯಡಿಯೂರಪ್ಪನವರು ಮತ್ತು ವಿಜಯೇಂದ್ರನವರು ಚುನಾವಣಾ ಪ್ರಚಾರಕ್ಕೆ ಬರೋದಾಗಿ ಹೇಳಿದ್ದಾರೆ
ತಮ್ಮ ಮಗನ ಚುನಾವಣೆಯಂತೆ ಮುಂದೆ ನಿಂತು ಭಾಗಿಯಾಗೋದಾಗಿ ಹೇಳಿದ್ದಾರೆ ಎರಡೆರಡು ಬಾರಿ ಪ್ರಚಾರಕ್ಕೆ ಬರೋದಾಗಿ ಹೇಳಿದ್ದಾರೆ ನಮ್ಮ ಗುರಿ ಒಂದೇ ,ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು.. 400ಕ್ಷೇತ್ರವನ್ನ ದೇಶದಲ್ಲಿ ಗೆಲ್ಲಬೇಕು ಅದರಲ್ಲಿ ನಾನು ಒಬ್ಬನಾಗಿರಬೇಕು
ಮೈತ್ರಿಗೆ ಪ್ರೀತಂ ಗೌಡ ವಿರೋಧ ವಿಚಾರ ಬಗ್ಗೆಯೂ ಮಾತನಾಡಿ, ಪ್ರೀತಂ ಗೌಡರು ಬಹಿರಂಗವಾಗಿ ಯಾವುದೇ ವಿರೋದಮಾಡಿಲ್ಲ ಅವರನ್ನ ಸಹ ಸಮಾಧಾನ ಮಾಡುವ ಕೆಲಸ ಮಾಡ್ತಿದ್ದೇವೆ ಹಾಸನದ ಅಭ್ಯರ್ಥಿ ಅಂತ ದೇವೇಗೌಡರು ಹೇಳಿದ್ದಾರೆ ಯಡಿಯೂರಪ್ಪ ಸಾಹೇಬ್ರು ಅರ್ಶಿವಾದ ಪಡೆದಿದ್ದೇನೆ ಖುದ್ದು ನನ್ನ ಚುನಾವಣೆ ಅಂತ ಕೆಲಸ ಮಾಡ್ತೀವಿ ಎಂದು ಯಡಿಯೂರಪ್ಪ ಸಾಹೇಬ್ರು ಹೇಳಿದ್ದಾರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತೀವಿ ಎಂದು ಹೇಳಿದರು.