ಹುಬ್ಬಳ್ಳಿ: ಬೆಂಗಳೂರಿನ ಚಿಕ್ಕಪೇಟೆಯ ಒಂದು ಓಣಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಸಹಜವಾಗಿಯೇ ಹನುಮಾನ್ ಚಾಲೀಸ್ ಸಂಬಂಧಿಸಿದಂತೆ ಹಾಡು ಹಾಕಿದ್ದಾರೆ. ಅಲ್ಲಿ ಮುಸಲ್ಮಾನ ಗೂಂಡಾಗಳು ದಾಳಿ ಮಾಡಿದ್ದಾರೆ, ಅದನ್ನು ಬಚಾವ್ ಮಾಡುವ ಸಲುವಾಗಿ ಬೇರೆ ಬೇರೆ ಕಥೆ ಕಟ್ಟುತ್ತಿದ್ದಾರೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈಗ ಮುಸ್ಲಿಮರ ರಂಜಾನ್ ಹಬ್ಬದಲ್ಲಿ ಹಿಂದೂಗಳು ಪೂಜೆ ಮಾಡಬಾರದಾ? ಹಾಡು ಹಾಕಬಾರದಾ ಇದು ಪಾಕಿಸ್ತಾನನಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಏನು ಬೇಕಾದರು ಮಾಡಬಹುದು ಅಂದುಕೊಂಡರೆ ಇಲ್ಲಿ ನಡೆಯಲ್ಲ ಡಾ. ಅಂಬೇಡ್ಕರ್ ಸಂವಿಧಾನ ಇದೆ, ಕಾನೂನು ಇದೆ. ಆ ಬದ್ಧತೆ ಬಿಟ್ಟು ನಡೆಯುವುದಿಲ್ಲ ಎಂದರು.
ನಿಮಗೆ ಗೊತ್ತೇ.? ಡಿಪ್ರೆಶನ್ʼನಿಂದ ಹೊರಬರಲು ಜಾಗಿಂಗ್, ಯೋಗ ಮಾಡಿದ್ರೆ ಸಾಕಂತೆ
ಈಗಾಗಲೇ ಅಲ್ಲಿ ದೊಡ್ಡ ಪ್ರತಿಭಟನೆ ಆಗಿದೆ. ಇಲ್ಲಿ ಗೂಂಡಾಗಿರಿ ನಡೆಯಲ್ಲ. ಹಾಗಾಗಿ ಇದನ್ನು ನಾನು ಖಂಡಿಸುತ್ತೇವೆ. ಕಾಂಗ್ರೆಸ್ ಸರಕಾರ ಇದ್ದ ಕಾರಣ ಇವರ ಆಟ ನಡೆತಾ ಇದೆ, ಇವರು ಬಾಲ ಬಿಚ್ಚುತ್ತಾ ಇದ್ದಾರೆ, ಈ ರೀತಿಯ ಪ್ರವೃತ್ತಿ ಎದುರಿಸಲು ಹಿಂದೂ ಸಮಾಜ ಸಿದ್ಧವಾಗಿದೆ. ನೀವು ರಂಜಾನ್ ಆಚರಣೆ ಮಾಡಿ, ಆದರೆ ನೀವು ನಮಗೆ ತೊಂದರೆ ಕೊಟ್ಟರೆ ಇನ್ಮೇಲೆ ಬಿಡಲ್ಲ ಎಂದು ಹೇಳಿದರು.