ಮಂಡ್ಯ:- ಇಂದು ಮೇಲುಕೋಟೆಯಲ್ಲಿ ಅದ್ದೂರಿ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು, ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಮೇಲುಕೋಟೆಯಲ್ಲಿ ಅದ್ದೂರಿ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು, ಇಂದು ರಾತ್ರಿ 8 ಗಂಟೆಗೆ ಬ್ರಹ್ಮೋತ್ಸವಕ್ಕೆ ಚಾಲನೆ ದೊರೆಯಲಿದೆ. ಜಿಲ್ಲಾಡಳಿತ ವತಿಯಿಂದ ವೈರಮುಡಿ ಉತ್ಸವ ನಡೆಯಲಿದೆ.
ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ಗರುಢಾರೂಢನಾದ ಚಲುವನಾರಾಯಣಸ್ವಾಮಿ ದರ್ಶನ ನೀಡಲಿದೆ. ಸಾಕ್ಷಾತ್ ಭಗವಂತನೆ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡುತ್ತಾನೆ.
ಚಲುವನಾರಾಯಣಸ್ವಾಮಿಯನ್ನ ಕಣ್ತುಂಬಿಕೊಳ್ಳಲು ಹೊರ ರಾಜ್ಯದಿಂದಲ್ಲೂ ಭಕ್ತರು ಬರಲಿದ್ದಾರೆ.
ಮೊದಲ ಭಾರಿ ವೈರಮುಡಿ ಬ್ರಹ್ಮೋತ್ಸವದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭಾಗಿಯಾಗಲಿದ್ದಾರೆ. ಇನ್ನೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಯೋಜಿಸಿದ ದೀಪಾಲಂಕ ಎಲ್ಲರ ಗಮನ ಸೆಳೆದಿದೆ.
50 ಲಕ್ಷ ವೆಚ್ಚದಲ್ಲಿ ಮೇಲುಕೋಟೆಯಲ್ಲಿ ವಿದ್ಯುತ್ ದೀಪಾಲಂಕರ ಆಯೋಜನೆ ಮಾಡಲಾಗಿದ್ದು, ಮೊದಲ ಬಾರಿಗೆ ಮೇಲುಕೋಟೆ ಬ್ರಹ್ಮೋತ್ಸವ ಆಚರಣೆಯ ಅವಕಾಶ ಸಿಕ್ಕಿದೆ. ಮಳೆ ಬೆಳೆ ಯಾಗಿ ನಾಡಿನ ಜನತೆಗೆ ಒಳ್ಳೆಯದಾಗಲಿ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆಯುವಂತೆ ಶಾಸಕ ಮನವಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಜಿಲ್ಲಾ ಖಜಾನೆಯಿಂದ ಬಿಗಿ ಭದ್ರತೆಯೊಂದಿಗೆ ವೈರಮುಡಿ ಆಭರಣಗಳು ಹೊರಡಲಿದೆ.