ಗದಗ: ಲೋಕಸಭಾ ಚುನಾವಣಾ ಕಾವು ದಿನೇ ದಿನೇ ರಂಗೇರ್ತಾ ಇದ್ದು ಹಾವೇರಿ-ಗದಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಟ್ಟದೇವರಮಠ ಅವರ ಗೆಲುವಿಗಾಗಿ ಗದಗ ನಗರದ ಕೆ ಎಚ್ ಪಾಟೀಲ್ ಸಭಾಭವನದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನ ನಡೆಸಲಾಯಿತು.
ಸಚಿವ ಎಚ್ ಕೆ ಪಾಟೀಲ್ ಮಾತನಾಡಿ ಗದಗ ಜಿಲ್ಲೆ ಶಿಸ್ತಿಗೆ ಹೆಸರಾಗಿರೋ ಜಿಲ್ಲೆ. ಆನಂದ ಗಡ್ಡದೇವರಮಠ ಅವರು ಹೇಳಿದಂತೆ ಡಿ ಆರ್ ಪಾಟೀಲ್ ಅವರು ಮಾತು ಕೊಟ್ರೆ ಅವರು ಹೇಗೆ ಇರ್ತಾರೆ ಅದೇ ಸಂಸ್ಕೃತಿ ಕಾಂಗ್ರೆಸ್ ನ ಎಲ್ಲಾ ನಾಯಕರಲ್ಲೂ ಬೆಳೆದು ಬಂದಿದೆ. ಆನಂದ ಗಡ್ಡದೇವರಮಠ ಗದುಗಿನ ಮಗ ಗದುಗಿನ ಜನತೆ, ಕಾರ್ಯಕರ್ತರು ಅವರಿಗೆ ವಿಶೇಷ ಬಲ ತುಂಬಿ ಆಶೀರ್ವಾದ ಮಾಡಿ ಅಂದ್ರು. ಸಚಿವ ಶಿವಾನಂದ ಪಾಟೀಲ್ ಮಾತನಾಡಿ ನಿಮ್ಮ ಭಾಗದ ಯುವಕ ಲೋಕಸಭಾ ಸದಸ್ಯನಾಗೋ ಅವಕಾಶ ಇದೆ ಅಂದ್ರು. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜಿ ಎಸ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮಾಜಿ ಶಾಸಕರಾದ ಡಿ ಆರ್ ಪಾಟೀಲ್, ಜಿ ಎಸ್ ಗಡ್ಡದೇವರಮಠ, ರಾಮಣ್ಣ ಲಮಾಣಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.