ಬೆಂಗಳೂರು:- ಅವ್ರದ್ದು ಮುದ್ದಾದ ಕುಟುಂಬ..ಹೊರರಾಜ್ಯದಿಂದ ಬಂದು ಬೆಂಗ್ಳೂರ್ ನಲ್ಲಿ ವಾಸವಾಗಿದ್ರು..ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಗಂಡ ಪತ್ನಿ ಹಾಗೂ ಮಗುವಿನ ಬಗ್ಗೆ ಸುಂದರ ಭವಿಷ್ಯದ ಕನಸು ಕಂಡಿದ್ದ. ಹೀಗಿರುವಾಗ ಕೈಯಲ್ಲಿಡಿದು ಆಡಿಸಬೇಕಿದ್ದ ತನ್ನ ಕಂದನನ್ನೇ ತಾಯಿ ಕೊಲೆ ಮಾಡಿದ್ದಾಳೆ..ಈ ಕುರಿತ ಕರುಣಾಜನಕ ಸ್ಟೋರಿ ಇಲ್ಲಿದೆ ನೋಡಿ..
ಈ ಪೊಟೋದಲ್ಲಿ ಕಾಣ್ತಿರೋ ಮುದ್ದಾ್ ಕುಟುಂಬವನ್ನು ನೋಡಿ..ಹೆಸ್ರು ಲಕ್ಷ್ಮಿ ನಾರಾಯಣ್ ಪತ್ನಿ ಚಿನ್ನಾ ಹಾಗೂ ಎರಡು ವರಬಂದಿದ್ದು ಶೃತಿಕಾ..ಮೂಲತ: ಆಂದ್ರದ ಚಿತ್ತೂರು ಮೂಲದ ಲಕ್ಷ್ಮಿ ನಾರಾಯಣ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ರು.ಹೀಗೆ ಕೆ ಆರ್ ಪುರಂ ಠಾಣಾ ವ್ಯಾಪ್ತಿಯ ಸೀಗೇಹಳ್ಳಿ ಬಳಿ ಬಾಡಿಗೆ ಮನೆ ಮಾಡಿಕೊಂಡು ಪತ್ನಿ ಮಗುವಿನ ಜೊತೆ ವಾಸವಾಗಿದ್ರು..ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದ ಲಕ್ಷ್ಮಿ ನಾರಾಯಣ್ , ವೈಟ್ ಫೀಲ್ಡ್ ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಜೀವನ ಸಂತೋಷವಾಗಿಯೇ ಸಾಗಿತ್ತು..
ಈ ನಡುವೆ ಗಂಡ ಹೆಂಡ್ತಿ ನಡುವೆ ವೈಮನಸ್ಸು ಗಲಾಟೆ ಮಾಮೂಲಿ ಆಗಿತ್ತು..ಆಗ ಹಿರಿಯರು ಸಂಧಾನ ಮಾಡಿ ಗಂಡ ಹೆಂಡ್ತಿಗೆ ಬುದ್ದಿವಾದ ಹೇಳಿದ್ರು..ಇದಲ್ಲದೆ ಪತ್ನಿ ಚಿನ್ನಾಗೆ ಆರೋಗ್ಯದ ಹಾಗೂ ಮಾನಸಿಕ ಸಮಸ್ಯೆ ಇದ್ದ ಹಿನ್ನಲೆ ಆಸ್ಪತ್ರೆಯಲ್ಲಿ ಗಂಡ ಚಿಕಿತ್ಸೆ ಕೊಡಿಸ್ತಿದ್ದ..ಹೀಗಿದ್ರೂ ಪತ್ನಿ ಪತಿ ಗಲಾಟೆ ಆಗಾಗ ನಡೀಯುತ್ತಿತ್ತು..ಹೀಗಿರುವಾಗ ಇದೇ ತಿಂಗಳ 17 ನೇ ತಾರೀಖು ಬೆಳಗ್ಗೆ 10 ಗಂಟೆಗೆ ಪತಿ ಲಕ್ಷ್ಮಿ ನಾರಾಯಣ್ ಕೆಲಸಕ್ಕೆ ಹೋದಾಗ ,ಪತ್ನಿ ಚಿನ್ನಾ ತನ್ನ ಪೋಷಕರಿಗೆ ಹಾಗೂ ಪತಿಗೆ ಕರೆ ಮಾಡಿ ಸಾಯ್ತಿರೋದಾಗಿ ತಿಳಿಸಿದ್ದಾಳೆ..ಅದಾಗಲೇ ಎರಡು ವರ್ಷದ ಮಗುವಿನ ಮುಖದ ಮೇಲೆ ಪಿಲ್ಲೋ ಪ್ರೆಸ್ ಮಾಡಿ ಕೊಲೆ ಮಾಡಿದ್ದಾಳೆ..ಆ ಬಳಿಕ ಡೋರ್ ಲಾಕ್ ಮಾಡಿಕೊಂಡು ಚಾಕುವಿನಿಂದ ಕತ್ತನ್ನ ಕೊಯ್ದುಕೊಂಡಿದ್ದಾಳೆ..ಅಷ್ಟರಲ್ಲಿ ಪತಿ ಮನೆಗೆ ಬಂದಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ..
ಇನ್ನು ಬೆಡ್ ಮೇಲೆ ಮಲಗಿದ ಸ್ಥಿತಿಯಲ್ಲಿದ್ದ ಮಗು ಮೃತಪಟ್ಟಿತ್ತು..ಆಸ್ಪತ್ರೆಗೆ ಸಾಗಿಸಿದ ಬಳಿಕ ಮಗುವನ್ನು ಕೊಲೆ ಮಾಡಿರೋ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ..ಸದ್ಯ ಆತ್ಮಹತ್ಯೆಗೆ ಯತ್ನಿಸಿದ್ದ ಚಿನ್ನಾ ಪ್ರಾಣಾಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ..ಇನ್ನು ಗಾಯಾಳು ಚಿನ್ನಾ ಆರೋಗ್ಯದ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ..ತಾನೂ ಸತ್ತರೆ ಮಗು ಅನಾಥ ಆಗಬಹುದು ಅಂತ ತಾಯಿ ಕೊಲೆ ಮಾಡಿದ್ದಾಳೆ..
ಸದ್ಯ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪತ್ನಿ ಲಕ್ಷ್ಮೀನಾರಾಯಣ್ ದೂರು ಕೊಟ್ಟಿದ್ದು ಪ್ರಕರಣ ದಾಖಲಾಗಿದೆ.. ಅದೇನೇ ಇರಲಿ ಮಗುವಿನ ಭವಿಷ್ಯದ ಬಗ್ಗೆ ಸುಂದರ ಸ್ವಪ್ನಗಳನ್ನ ಕಾಣಬೇಕಿದ್ದ ತಾಯಿಯೇ ಕೊಲೆ ಮಾಡಿದ್ದು ವಿಪರ್ಯಾಸದ ಸಂಗತಿ..