ಗದಗ:- ಲೋಕಸಭಾ ಟಿಕೇಟ್ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ವಿಚಾರವಾಗಿ ಸಚಿವ ಹೆಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಗದಗ್ ನಲ್ಲಿ ಮಾತನಾಡಿದ ಅವರು, ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಬಿಡುಗಡೆ ಆಗಬಹುದು. ಮೂರು ಕ್ಷೇತ್ರ ಬಿಟ್ಟು ಆಲ್ ಮೋಸ್ಟ್ ಎಲ್ಲಾ ಆಗಿದ್ದಾವೆ ಎಂದು ಅಧ್ಯಕ್ಷರೇ ಹೇಳಿದ್ದಾರೆ. ಆಲ್ ಮೋಸ್ಟ್ ಫೈನಲ್ ಆಗಿದೆ
ಎರಡು ಮೂರು ಕ್ಷೇತ್ರಗಳ ಬದಲಾವಣೆ ಬಗ್ಗೆ ಮಾತಾಡ್ತಿದ್ದಾರೆ.. ಮಾತುಕತೆ ನಡೆದಿರಬಹುದು. ಬಿಜೆಪಿಯಲ್ಲಿ ಕೊಪ್ಪಳ , ಹಾವೇರಿ, ಕೋಲಾರ, ಮಂಡ್ಯ, ದಾವಣಗೆರೆಯಲ್ಲಿ ರಾಜಕೀಯ ಗೊಂದಲದ ಗೂಡಗಿವೆ ಎಂದರು.
ಕರ್ನಾಟಕದ ಬಿಜೆಪಿ ಅಮಿತ್ ಶಾ ಮಾತು ಕೇಳ್ತಿಲ್ಲ, ಮೋದಿ ಮಾತು ಕೇಳ್ತಿಲ್ಲ. ಬಿಜೆಪಿ ನಾಯಕರು, ಬಿಜೆಪಿ ಕಟ್ಟಿದವರು ಅವರಲ್ಲಿ ಈಶ್ವರಪ್ಪ ಕೂಡಾ ಒಬ್ಬರು. ಮೋದಿ ಬಂದಾರ ಅಂದ್ರೆ ಬಂದಿದ್ದಾನು ಹೋಗೋ ಅಂದ್ರು. ಇದು ಬಿಜೆಪಿ ಅವರ ನಾಯಕರನ್ನು ಅಗೌರವದಿಂದ ನೋಡೋದಕ್ಕೆ ಸಾಕ್ಷಿಯಾಗಿದೆ ಎಂದರು.