ಬೆಂಗಳೂರು:- ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಸದಾನಂದಗೌಡರು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡೋದಿಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿ ಎಂದರು.
ಸದಾನಂದಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಸದಾನಂದಗೌಡರು ಪಕ್ಷ ಬಿಡುತ್ತಾರೆ ಅನ್ನೋದು ಸುಳ್ಳು ಸುದ್ದಿಗಳು. ಸದಾನಂದಗೌಡ ಪಕ್ಷ ಬಿಡುವ ಯೋಚನೆ ಕೂಡಾ ಮಾಡಲ್ಲ ಎಂದರು
ಸದಾನಂದಗೌಡರು ನಮ್ಮ ಹಿರಿಯರು. ನಾನು ಮೊದಲ ದಿನ ಹೋದಾಗಲೇ ಆಶೀರ್ವಾದ ಮಾಡಿದ್ದಾರೆ. ಆದಾದ ಮೇಲೆ ಕೆ.ಆರ್ ಪುರಂ ಮತ್ತು ಪುಲಕೇಶಿ ನಗರದಲ್ಲಿ ಚುನಾವಣೆ ಪ್ರಚಾರದಲ್ಲಿ ಬಂದು ಭಾಗಿಯಾಗಿದ್ದರು. ನನಗಿಂತ ಉತ್ಸಾಹದಿಂದ ಅವರು ಓಡಾಡುತ್ತಾರೆ. ಅವರು ಇವತ್ತು ಊರಿಗೆ ಹೋಗಿದ್ದಾರೆ. ವಾಪಸ್ ಬಂದ ಮೇಲೆ ನಮ್ಮೆಲ್ಲರ ಪರವಾಗಿ ಅವರು ಕೆಲಸ ಮಾಡುತ್ತಾರೆ. ನನ್ನ ಪರ ಮಾತ್ರವಲ್ಲ ಮೈಸೂರಿಗೆ ಅವರು ಹೋದರೂ ಅನುಕೂಲ ಆಗುತ್ತದೆ. ಅಲ್ಲೂ ಕೂಡಾ ಪ್ರಚಾರ ಮಾಡುತ್ತಾರೆ. ಅವರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು
ಇದೆಲ್ಲವೂ ಸುಳ್ಳು. ಕಾಂಗ್ರೆಸ್ ಅವರು ಸಂಶಯ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ಅಭ್ಯರ್ಥಿಗಳು ಇಲ್ಲ. ಕಾಂಗ್ರೆಸ್ನಲ್ಲಿ ಒಳಜಗಳ ಇದೆ. ಇದನ್ನ ಮರೆಮಾಚೋಕೆ ಬಿಜೆಪಿಯ ಆ ನಾಯಕ ಬರುತ್ತಾರೆ. ಈ ನಾಯಕ ಬರ್ತಾರೆ, ಅವರನ್ನ ಮಾತನಾಡಿಸುತ್ತೇವೆ. ಇವರನ್ನು ಮಾತಾಡಿಸುತ್ತೇವೆ ಅನ್ನೋ ಸುಳ್ಳು ಸುದ್ದಿ ಬಿಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.