ಬಾಗಲಕೋಟೆ: ಎಲ್ಲಡೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅದೇ ರೀತಿಬಾಗಲಕೋಟೆ ತಾಲೂಕಿನ ಬೀಳಗಿಯ ಹೊಸ ಮೂರನಾಳ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಮುಂಭಾಗದಲ್ಲಿ ಖಾಲಿ ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಊರಲ್ಲಿ ಜಾತ್ರೆ ನಡೆಯುತ್ತಿದ್ದು ಮನೆಗೆ ಬಂದ ನೆಂಟರಿಗೆ ಕುಡಿಯಲು ನೀರಿಲ್ಲ, ಅವರಿಗೆ ಕುಡಿಯಲು ನೀರು ಕೊಡಲಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಪಿಡಿಒ ಪೊಲೀಸರ ಇದ್ದರೂ ವಾಟರ್ ಮ್ಯಾನ್ ಬಗ್ಗೆ ಜನರು ಆಕ್ರೋಶಗೊಂಡರು.ವಿದ್ಯುತ್ ಮೋಟಾರ್ ಸುಟ್ಟಿದ್ದು, ದುರಸ್ತಿ ಮಾಡಿಸುವುದಾಗಿ ಪಂಚಾಯಿತಿ ಅಧಿಕಾರಿಗಳು ಸ್ಪಷ್ಟಪಡಿಸಿದರು.