ಕಲಬುರ್ಗಿ:– ವೃತ್ತಿಯಲ್ಲಿ ರಾಜಕಾರಣಿ ಆಗಿರುವ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮೂಲವೃತ್ತಿ ವೈದ್ಯಕೀಯ ಕ್ಷೇತ್ರ..ಡಾಕ್ಟರ್ ಆಗಿರುವ ಜಾಧವ್ ನಿನ್ನೆ ಅಫಜಲಪುರ ಮತಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಕುಡಿಯೋ ನೀರಿಗಾಗಿ ಹೋರಾಟ ಮಾಡ್ತಿದ್ದ ಶಿವಕುಮಾರ್ ನಾಟೀಕರ್ ಸ್ಥಳಕ್ಕೆ ತೆರಳಿದ ವೇಳೆ ಹೋರಾಟಗಾರರ ಆರೋಗ್ಯ ಏರುಪೇರಾಗಿರೋದನ್ನ ಗಮನಿಸಿದ್ರು.
ಕೂಡಲೇ ಬಿಪಿ ಚಕ್ ಮಾಡಿದ್ರು. ಪಲ್ಸ್ ನೋಡಿದ್ರು. ತಕ್ಷಣವೇ ಆಸ್ಪತ್ರೆಗೆ ಫೋನ್ ಮಾಡಿ ಮುಂದಿನ ಚಿಕಿತ್ಸೆ ಕೊಡಿ ಅಂತ ವೈದ್ಯಾಧಿಕಾರಿಗೆ ಸೂಚನೆ ಕೊಟ್ಟರು.
ಎಲೆಕ್ಷನ್ ಪ್ರಚಾರದ ನಡುವೆಯೂ ಜಾಧವ್ ವೈದ್ಯರಾಗಿದ್ದುದು ನೋಡಿ ಎಲ್ಲರೂ ಪ್ರಶಂಸೆ ಮಾಡಿದ್ರು..