ಬಳ್ಳಾರಿ:- ಇಲ್ಲಿನ ಆರಾಧ್ಯ ದೇವತೆ ಕನಕ ದುರ್ಗಮ್ಮ ಸಿಡಿಬಂಡಿ ರಥೋತ್ಸವ ಬಹಳ ಸಂಭ್ರಮ ಸಡಗರದಿಂದ ಜರುಗಿದೆ.
ಸಾಮಾನ್ಯವಾಗಿ ರಥೋತ್ಸವ ಅಂದ್ರೇ ತೇರನ್ನು ಎಳೆಯುತ್ತಾರೆ, ಬಳ್ಳಾರಿ ದುರ್ಗಮ್ಮ ಸಿಡಿಗೆ ಬಂಡಿ ಕಟ್ಟಿ ರಥೋತ್ಸವ ಮಾಡಲಾಗ್ತದೆ. ಎತ್ತಿಗೆ ದೊಡ್ಡದಾದ ಮರದ ದಿಮ್ಮೆಯನ್ನು ಕಟ್ಟಿ ಅದಕ್ಕೊಂದು ದೇವರ ಗೊಂಬೆಯನ್ನು ನೇತುಹಾಕಿ ಎಳೆಯಲಾಗ್ತದೆ,
ಹೂವು ಹಣ್ಣು ಎಸೆಯೋದ್ರ ಜೊತೆಗೆ ಕೋಳಿಯನ್ನು ಎಸೆಯುವ ವಾಡಿಕೆ ಇದೆ. ಅಲಂಕೃತ ಸಿಡಿಬಂಡಿ ಕೌಲ್ ಬಜಾರ್ ಪ್ರದೇಶದಿಂದ ಗಾಣಿಗ ಸಮಾಜ ಮೆರವಣಿಗೆ ಮೂಲಕ ಆಗಮಿಸಿದ್ದು, ಮೂರು ಜೊತೆ ಎತ್ತುಗಳ ಮೂಲಕ ಸಿಡಿಬಂಡಿ ಉತ್ಸವಕ್ಕೆ ಚಾಲನೆ ದೊರೆತಿದೆ.
ಮೂರು ಸುತ್ತು ದೇವಸ್ಥಾನದ ಸುತ್ತಲೂ ಪ್ರದಕ್ಷಿಣಿ ಮೂಲಕ ಸಿಡಿಬಂಡಿ ಕಾರ್ಯ ನಡೆದಿದ್ದು, ಸಿಡಿಬಂಡಿ ಉತ್ಸವದ ಹಿನ್ನಲೆ ದುರ್ಗಮ್ಮಗೆ ವಿಶೇಷ ಅಭಿಷೇಕ, ಸ್ವರ್ಣ ಮುಖವಾಡದ ಅಲಂಕಾರ ಮಾಡಲಾಗಿದ್ದು, ರಥೋತ್ಸವದ ವೇಳೆ ಸಾವಿರಾರು ಜನರು ಬಂದು ಕುಂಕುಮಾರ್ಚಮೆ ಮಾಡಿಸೋದು ವಾಡಿಕೆ. ತಮಟೆ, ಕಂಚಿ, ಮೇಳ, ಡೊಳ್ಳು, ಚಂಡೆ ಮದ್ದಳೆ ಮೇಳ, ನಂದಿ ಕೋಲು, ಸಮಾಳ, ಮಹಿಳಾ ಡೊಳ್ಳು ಕಲಾ ತಂಡಗಳ ಪ್ರದರ್ಶನ ಜರುಗಿದೆ.
ಸಿಡಿಬಂಡಿ ಉತ್ಸವ ಹಿನ್ನೆಲೆ ದೇವಸ್ಥಾನಕ್ಕೆ ವಿಶೇಷ ವಿದ್ಯುತ್ ದೀಪದ ಅಲಂಕಾರ ಜೊತೆಗೆ ಹೂವಿನ ಅಲಂಕಾರ ಮಾಡಲಾಗಿದೆ.