ಆನೇಕಲ್:– ಪ್ರೀತಿ ಮಾಡಿದ ಯುವತಿ ಕೈ ಕೊಟ್ಟಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲೂಕಿನ ಹುಲಿಮಂಗಳ ನಂಜಪುರ ರಸ್ತೆಯಲ್ಲಿ ಜರುಗಿದೆ.
ಇಂದ್ರ ಕುಮಾರ್ ಮತ್ತು ರಾಧಾ ದಂಪತಿಗಳ ಪುತ್ರ ಹರ್ಷಿತ್ ಮನೆಯಲ್ಲಿ ನೇಣಿಗೆ ಶರಣಾದ ಯುವಕ ಎನ್ನಲಾಗಿದೆ. ಕಳೆದ ಒಂದುವರೆ ವರ್ಷದಿಂದ ಹರ್ಷಿತ್ ಹಾಗೂ ತುಮಕೂರು ಮೂಲದ ಮೇಘ ಆನೇಕಲ್ ಎ ಎಸ್ ಪಿ ಕಾಲೇಜಿನಲ್ಲಿ ಓದುವಾಗ ಪರಸ್ಪರ ಪ್ರೀತಿ ಮಾಡುತ್ತಿದ್ದರು.
ಯುವತಿ ಮೇಘ ತನ್ನ ಅತ್ತೆ ಮತ್ತು ಮಾವನ ಮನೆಯಲ್ಲಿ ವಾಸವಾಗಿದ್ಲು. ಆದರೆ ಇತ್ತೀಚಿಗೆ ಬೇರೆಯವರೊಂದಿಗೆ ಮೇಘ ಸಲುಗೆ ಇಂದ ಇದ್ದಳು. ಅಲ್ಲದೇ ಮೇಘ ಬಿಡುವಂತೆ ಅನಾಮಿಕ ವ್ಯಕ್ತಿಯಿಂದ ಹರ್ಷಿತ್ ಗೆ ಕರೆ ಕೂಡ ಬಂದಿತ್ತು. ಇದರಿಂದ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ.
ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.