ಹೊಸಕೋಟೆ:- ನಗರದಲ್ಲಿ ಬೈಕ್ ಕಳ್ಳರ ಹಾವಳಿ ವಿಪರೀತವಿದೆ.. ಎಲ್ಲಿ ನಿಲ್ಲಿಸಿದ್ರು ಸಹ ಕಳ್ಳರು ಮಾತ್ರ ಕ್ಷಣಾರ್ಧದಲ್ಲಿ ಅದನ್ನು ಎಸ್ಕೇಪ್ ಮಾಡ್ತಾರೆ.. ಇದ್ರಿಂದ ಬೈಕ್ ಸವಾರರು ತಮ್ಮ ಗಾಡಿಗಳ ರಕ್ಷಣೆಗಾಗಿ ಅಂತ ಪೇ ಆ್ಯಂಡ್ ಪಾರ್ಕ್ ಮಾಡ್ತಾರೆ.. ಒಂದಿಷ್ಟು ಹಣ ಹೋದರು ಪರವಾಗಿಲ್ಲ., ನಮ್ಮ ಗಾಡಿ ಸೇಫ್ ಇದ್ದರೆ ಸಾಕು ಅಂತ.. ಆದ್ರೆ ಇಲ್ಲಿ ಪೇ ಮಾಡಿ ಪಾರ್ಕ್ ಮಾಡಿದ್ರು ಸಹ ಕಳ್ಳರು ಬೈಕ್ ಒಂದನ್ನು ಕಳ್ಳತನ ಮಾಡ್ಕೊಂಡಪ ಹೋಗಿದ್ದಾರೆ..
ಹೌದು.. ಅಮ್ಮ ಶಕ್ತಿ ಪೀಠ ಶ್ರೀಕಾಟೇರಮ್ಮ ಟೆಂಪಲ್ ಹೊಸಕೋಟೆ ಟೆಂಡರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ಬೈಕ್ ಕಳ್ಳತನ ಮಾಡಲಾಗಿದೆ..ದೇವಸ್ಥಾನಕ್ಕೆ ಬಂದಿದ್ದ ವೇಳೆ ಘಟನೆ ನಡೆದಿದ್ದು ಭಕ್ತಾದಿಯೊಬ್ಬರು ಇದ್ರಿಂದ ಕಂಗಾಲಾಗಿದ್ದಾರೆ.. ತಾಲ್ಲೂಕಿನ ಕಂಬಳಿಪುರ ಕಾಟೇರಮ್ಮ ದೇವಸ್ಥಾನದ ಬಳಿಯಲ್ಲಿರುವ
ಪಾರ್ಕಿಂಗ್ ಏಜೆನ್ಸಿ ಅವರಿಗೆ ಕೇಳಿದರೆ ನಾವು ಏನು ಮಾಡೋದು ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ..ಚಿಕ್ಕಸಂದ್ರದ ನಿವಾಸಿಯಾದ ಶಶಿಕಾಂತ್ ಎಂಬುವವರು ದೇವಸ್ಥಾನ ದರ್ಶನಕ್ಕೆಂದು ಅವರ ಸ್ಪ್ಲೆಂಡರ್ ಬೈಕ್ KA 04KA2856 ನಲ್ಲಿ ಬಂದಿದ್ದರು ನಂತರ ದರ್ಶನ ಮುಗಿಸಿ ವಾಪಸ್ಸಾದಾಗ ಬೈಕ್ ಕಳ್ಳತನವಾಗಿತ್ತು.. ಆನಂತರ ಬೈಕ್ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾ ದಲ್ಲಿ ಪರಿಶೀಲನೆ ನಡೆಸಿದಾಗ ಕಳ್ಳತ ಆಟ ಬಯಲಾಗಿದೆ..
ಇದೀಗ ಸೂಲಿಬೆಲೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ..