ಗೌರಿಬಿದನೂರು: ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಹಳ್ಳಿ ಯಲ್ಲೂ ರಸ್ತೆಗಳ ಅಭಿವೃದ್ಧಿ ಮಾಡಬೇಕು. ಮೂಲ ಸೌಕರ್ಯ ಒದಗಿಸಿಕೊಡಬೇಕು. ಗುಣಮಟ್ಟದ ಕಾಮ ಗಾರಿಗಳನ್ನು ಗುತ್ತಿಗೆದಾರರು ಮಾಡಬೇಕು ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿಗೌಡ ತಿಳಿಸಿದರು.
ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ಮುಟ್ಟಾವಲಹಳ್ಳಿಯಿಂದ ಬಂದ್ರಹಳ್ಳಿ ಹಾಗೂ ನರಸಿಂಹ ರೆಡ್ಡಿ ಹಳ್ಳಿ ಗ್ರಾಮಗಳಿಗೆ 2 ಕೋಟಿ ವೆಚ್ಚದ ಸಿ ಸಿ ರಸ್ತೆ ಹಾಗೂ ತೋಕಲಹಳ್ಳಿ ಗ್ರಾಮದಿಂದ ಹುಲಿಕುಂಟೆ ಸಂಪರ್ಕ ಕಲ್ಪಿಸುವ ರಸ್ತೆಗೆ 1ಕೋಟಿ 40 ಲಕ್ಷ ಹಾಗೂ ಜಿ ಬೊಮ್ಮಸಂದ್ರ ಗ್ರಾಮದಿಂದ ಸಿಂಗಾನಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಗೆ 1ಕೋಟಿ 40 ಲಕ್ಷ ವೆಚ್ಚದ ಕಾಮಗಾರಿಗೆ ಹಾಗೂ ವಿವಿಧ ರೀತಿಯ ಕಾಮಗಾರಿಗಳಿಗೆ ಭೂಮಿಪೂಜೆಯನ್ನು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡರು ನೇರವೇರಿಸಿದರು
ಎಸ್ ಸಿ ಪಿ ಹಾಗೂ ಟಿ ಎಸ್ ಪಿ ಯೋಜನೆಯಡಿಯಲ್ಲಿ ಸಿ ಸಿ ರಸ್ತೆ, ಚರಂಡಿ ಕಾಮಗಾರಿಗಳು ,ಶಾಲಾ ನೂತನ ಕೊಠಡಿಗಳು,ಸಮಾಜ ಕಲ್ಯಾಣ ಇಲಾಖೆಯ ಆದರ್ಶ ಗ್ರಾಮ ಯೋಜನೆಯ ಕಾಮಗಾರಿಗಳು ಸೇರಿದಂತೆ ಯೋಜನೆಯ ಕಾಮಗಾರಿಗಳು ಸೇರಿದಂತೆ ಒಟ್ಟು 6 ಕೋಟಿ ವೆಚ್ಚದ 21 ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು,
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಇದೇ ಸಂದರ್ಭದಲ್ಲಿ ಮುಖಂಡರಾದ ಕೋಚಿಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಜೆ ಕಾಂತರಾಜ್,ಬಿ ಜಿ ವೇಣುಗೋಪಾಲ ರೆಡ್ಡಿ , ವೆಂಕಟರಾಮ್ ರೆಡ್ಡಿ , ಆರ್ ಆರ್ ರೆಡ್ಡಿ, ನಾಗೇಂದ್ರ, ದಲಿತ ಮುಖಂಡರಾದ ನಂಜುಂಡಪ್ಪ ,ವಾಟದಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನೀತ ಮಹೇಶ್, ರಾಮಾಂಜಿನಮ್ಮ, ಹುದುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಮಾರ್, ಉಪಾಧ್ಯಕ್ಷರಾದ ವನೀಜ ಲಿಂಗ ರೆಡ್ಡಿ , ಸದಸ್ಯರಾದ ವಿಜಯಲಕ್ಷ್ಮಿ ನರಸರೆಡ್ಡಿ, ಶಿವಶಂಕರ್, ಬಾಲಪ್ಪ, ಗಾಯಿತ್ರಿ ಸುರೇಶ್, ಅಶ್ವತ್ಥಪ್ಪ, ಬೇಬಿ ರಮೇಶ್, ಪವನ್ ರೆಡ್ಡಿ, ಬೈಚಾಪುರ ಗಂಗಾಧರಪ್ಪ, ರಾಮಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜ್ ಶೇಖರ್, ಸಿರಿ, ಗೆದರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಘು, ಕಾದಲವೇಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಮರಳೂರು ಗೋಪಾಲ್, ಬಾಲಕೃಷ್ಣ, ಬ್ರಹ್ಮಿ, ಗುತ್ತಿಗೆದಾರರಾದ ದಯಾನಂದ್, ಬೈಯಪ್ಪ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು ,