ಕೊಪ್ಪಳ:- ಲೋಕಸಭಾ ಟಿಕೆಟ್ ಮಿಸ್ ಆದ್ರೂ ಸಂಸದ ಕರಡಿ ಸಂಗಣ್ಣ ಅವರು ಮೋದಿ ಹಾಡಿ ಹೊಗಳಿದ್ದಾರೆ.
ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದ ಜನ್ರಿಗೆ ನಾನು ಋಣಿಯಾಗಿದ್ದೇನೆ. ಭಾರತವನ್ನು ಈ ಹಿಂದೆ ಹಾವಾಡಿಗರ ದೇಶ ಎಂದು ಬೇರೆ ದೇಶದವರು ಕರೆಯುತ್ತಿದ್ದರು. ಭಾರತವನ್ನು ಇಂದು ಜಗತ್ತು ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. 80 ಏರ್ಪೋರ್ಟ್ ಇದ್ದವು, ಇದೀಗ 120 ಏರ್ಪೋರ್ಟ್ಗಳು ಆಗಿವೆ. ಇಲ್ಲಿನ ಏರ್ಪೋರ್ಟ್ ಅಭಿವೃದ್ಧಿಗಳ ಬಗ್ಗೆ ಅಮೆರಿಕಾದಲ್ಲಿ ಚರ್ಚೆ ಆಗುತ್ತಿದೆ. ಇಷ್ಟೊಂದು ಅಭಿವೃದ್ಧಿಗೆ ಮೋದಿ ಅವರೇ ಕಾರಣ ಎಂದಿದ್ದಾರೆ. ಇನ್ನು ನನ್ನ ಅವಧಿಯಲ್ಲಿ ಅತೀ ಹೆಚ್ಚು ತಾಲೂಕುಗಳಲ್ಲಿ ರೇಲ್ವೆ ಲೈನ್ಗಳು ಆಗಿವೆ. ಮೋದಿಯವರು ಸರ್ವಾಜನಾಂಗಕ್ಕೂ ಅಭಿವೃದ್ಧಿ ಯೋಜನೆ ನೀಡುತ್ತಿದ್ದಾರೆ ಎಂದರು.
ಟಿಕೆಟ್ ಕೈ ತಪ್ಪುತ್ತಿದ್ದಂತೆ ಬೇಸರ ಹೊರಹಾಕಿದ್ದ ಕರಡಿ ಸಂಗಣ್ಣ, ತಮ್ಮ ಆಪ್ತರ ಮುಂದೆ ನೋವು ತೋಡಿಕೊಂಡಿದ್ದರು. ಕಳೆದ 10 ವರ್ಷದಲ್ಲಿ ಚೆನ್ನಾಗಿ ಕೆಲಸವನ್ನ ಮಾಡಿದ್ದೇನೆ. ಕ್ಷೇತ್ರದಲ್ಲಿ ಜನ, ಕಾರ್ಯಕರ್ತರ ಜೊತೆ ಸಂಪರ್ಕ ಇತ್ತು. ನನಗೇ ಟಿಕೆಟ್ ಎನ್ನುತ್ತಿದ್ದರು. ಆದರೆ, ದಿಢೀರನೇ ನನಗೆ ಟಿಕೆಟ್ ನೀಡುವುದಿಲ್ಲ ಎಂದರು. ಜನರ ಸಂಪರ್ಕ ಇಲ್ಲದಿರುವವರಿಗೆ ಟಿಕೆಟ್ ನೀಡಿದ್ದಾರೆ. ಯಾವ ಮಾನದಂಡ ಅನುಸರಿಸಿದ್ದಾರೆ ಎಂದು ಕರಡಿ ಸಂಗಣ್ಣ ಆಕ್ರೋಶ ಹೊರ ಹಾಕಿದ್ದರು