ರಾಮನಗರ:– ರಾಮನಗರ ಜಿಲ್ಲಾ ಕಾರಗೃಹ ಸ್ಥಳಾಂತರ ಮಾಡಲು ಜಿಲ್ಲಾಧಿಕಾರಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.
ಜಿಲ್ಲಾ ಕಾರಗೃಹಕ್ಕೆ ಸೇರಿದ ಜಾಗವನ್ನ ಇತರ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಮತ್ತು ರಾಮನಗರ-ಚನ್ನಪಟ್ಟಣ ಮಧ್ಯೆ ನೂತನ ಕಾರಗೃಹ ನಿರ್ಮಾಣಕ್ಕೆ ಸೂಚಿಸಿದ್ದಾರೆ.
ಕೂಡಲೇ ಕಾರಗೃಹ ಬೇರೆಡೆ ಶಿಫ್ಟ್ ಮಾಡುವ ಉದ್ದೇಶದ ಹಿನ್ನಲೆ ಜಾಗಕ್ಕಾಗಿ ಹುಡುಕಾಟ ನಡೆಸಿದ್ದಾರೆ. 4 ರಿಂದ 5 ಎಕರೆ ಜಾಗ ಸಿಕ್ಕ ಬಳಿಕ ರಾಮನಗರ ಕಾರಗೃಹ ಶಿಫ್ಟ್ ಆಗಲಿದೆ. ಇನ್ನು 2007ರಲ್ಲಿ ನಿರ್ಮಾಣವಾಗಿರುವ ರಾಮನಗರ ಬಂಧಿಖಾನೆಯಲ್ಲಿ ಬರೊಬ್ಬರಿ 300ಕ್ಕೂ ಅಧಿಕ ಖೈದಿಗಳಿದ್ದಾರೆ. ಈ ಖೈದಿಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ಜೈಲಿನ ಅಧಿಕಾರಿಗಳು ಕೂಡ ಜೈಲು ಶಿಫ್ಟ್ ಮಾಡುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಇದೀಗ ಡಿಸಿಎಂ ಕೂಡ ಇದಕ್ಕೆ ಅಸ್ತು ಎಂದಿದ್ದು, ಸಾಮಾನ್ಯ ಜೈಲಿನಿಂದ ಸೆಂಟ್ರಲ್ ಜೈಲ್ ಮಾಡಲು ಜಾಗಕ್ಕಾಗಿ ಹುಡುಕಾಟ ನಡೆದಿದೆ.