ಹುಬ್ಬಳ್ಳಿ: ಇಂದು ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟ ಆಗಿದ್ದು ಜೂನ್ 4 ಕ್ಕೆ ಫಲಿತಾಂಶ ಇದ್ದು ಭಾರತೀಯ ಜನತಾ ಪಕ್ಷ ಇಡೀ ದೇಶದಲ್ಲಿ ಸಂಪೂರ್ಣವಾಗಿ ನಾವು ಚುನಾವಣೆಗೆ ಸನ್ನದ್ಧ ರಾಗಿದ್ದು ಸಂಪೂರ್ಣ ಚುನಾವಣಾ ಆಯೋಗ ಎಲ್ಲಾ ವಿಷಯಗಳಗಳನ್ನ ಗಮನಿಸಿ ಹೆಚ್ಚು ಮತದಾನ ಆಗುವಂತೆ ಅಳೆದು ತೋಗಿ ದಿನಾಂಕ ಪ್ರಕಟ ಮಾಡಿದ್ದಾರೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದರು.
ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈ ಚುನಾವಣೆಯಲ್ಲಿ ಮೊದಲೇ ತಯಾರಿ ಆಗಿರುವುದರಿಂದ ಯಾವುದೇ ತೊಂದರೆ ಇಲ್ಲ ಅತ್ಯುತ್ತಮ ಆಗಿದೆ ಹತ್ತು ವರ್ಷಗಳಲ್ಲಿ ಒಳ್ಳೆಯ ಕೆಲಸ ಆಗಿದ್ದ ನಿಯತ್ತು ಕೂಡಾ ಒಳ್ಳೆಯುದು ಆಗಿದೆ. ಆದ್ದರಿಂದ ಭಾರತೀಯ ಜನತಾ ಪಕ್ಷ ಒಬ್ಬಂಟಿಯಾಗಿ ಕನಿಷ್ಠ ಪಕ್ಷ 370 ಸ್ಥಾನ ಗೆಲ್ಲುತ್ತೇವೆ. ಎನ್ ಡಿಎ ಅಲೈನ್ಸ್ 400 ಕ್ಕೋ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಗರಿಬ್ ಹಠಾವೋ ಸೇರಿದಂತೆ ಅನೇಕ ಸುಳ್ಳು ಸುಳ್ಳು ಹೇಳಿಕೊಂಡು ಬಂದಿದ್ದರು ಅದಕ್ಕೆ ನರೇಂದ್ರ ಮೋದಿ ಅವರು ಜನಪರ ಕಾರ್ಯಕ್ರಮ ಕೊಟ್ಟು ಬದಲಾವಣೆಯನ್ನು ವೇಗವಾಗಿ ಮಾಡಿದ್ದಾರೆ. ಇನ್ನು ಮಾಡುತ್ತೇವೆ. ದೇಶದಲ್ಲಿ ಇರುವು ಬಡತನ ಇತ್ಯಾದಿ ಸಮಸ್ಯೆಗಳನ್ನ ಬಗೆಹರಿಸಲು ಪ್ರಯಾಣಿಕ ಬಗೆಹರಿಸಲು ಅಧ್ಯಯನ ಮಾಡಿ ವಿಶ್ಲೇಷಣೆ ಮಾಡಿ ಒಳ್ಳೆಯ ಆಗಿದ್ದು ಬಹು ಆಯಾಮ ವರದಿ ಬಂದಿದೆ ಎಂದರು.
ಇದನ್ನ ಇನ್ನೀ ವೇಗವಾಗಿ ಮಾಡಿ ಕನಿಷ್ಠ ಪಕ್ಷ ಕಡುಬಡತದಲ್ಲಿ ಇರುವ 70 ಶೇಕಡಾ ಜನರನ್ನು ಮುಂದೆ ಬರಲು ಮಾಡಲಾಗುತ್ತದೆ ಎಂದು ಭರವಸೆ ನೀಡಿದರು .ಪ್ರಧಾನಿ ನರೇಂದ್ರ ಅವರು ಬರುವ ಮುನ್ನ ಹತ್ತು ವರ್ಷಗಳ ಮೊದಲು ಎಷ್ಟು ಭ್ರಷ್ಟಾಚಾರ ಇತ್ತು ಅದು ಈಗ ಕಡಿಮೆ ಆಗಿದೆ ಎಂದರು.
ಚುನಾವಣಾ ಬಾಂಡ್ ದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ ಎಂದ ಅವರು ಮುಂದಿನ ದಿನಗಳಲ್ಲಿ ಸಹ ಕಪ್ಪು ಹಣ ತಡೆಯುವ ಕೆಲಸ ಸಹ ಮಾಡಲಾಗುವುದು ಎಂದರು