ಹಾವೇರಿ: ಈ ಭಾಗದಲ್ಲಿ 3 ಲಕ್ಷಕ್ಕೂ ಹೆಚ್ಚು ಲೀಡ್ ನಲ್ಲಿ ಬೊಮ್ಮಾಯಿ ಗೆಲ್ತಾರೆ ಎಂದು ರಾಣೆಬೆನ್ನೂರಿನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಉಸ್ತುವಾರಿ, ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಜನಪ್ರಿಯ ನಾಯಕರು, ಜನರ ಮನಸ್ಸನ್ನು ಗೆದ್ದವರು. ಈ ಭಾಗದಲ್ಲಿ 3 ಲಕ್ಷಕ್ಕೂ ಹೆಚ್ಚು ಲೀಡ್ ನಲ್ಲಿ ಬೊಮ್ಮಾಯಿ ಗೆಲ್ತಾರೆ. ಪಕ್ಷ ಬೆಳೆದ ಹಾಗೆ ಆಕಾಂಕ್ಷಿಗಳ ಸಂಖ್ಯೆ ಸಹಜವಾಗೇ ಹೆಚ್ಚಾಗುತ್ತೆ.ಇದು ಸ್ವಾಗತಾರ್ಹ ಕೂಡಾ ಎಂದರು.
ಇನ್ನೂ ಈಶ್ವರಪ್ಪ ಪುತ್ರನಿಗೆ ಟಿಕೆಟ್ ಮಿಸ್ ಆದ ಕಾರಣ ಈಶ್ವರಪ್ಪ ಬಂಡಾಯ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, ಪಕ್ಷದ ವರಿಷ್ಟರು ಬೇರೆ ಬೇರೆ ರೀತಿ ವಿಚಾರ ಕನ್ಸಿಡರ್ ಮಾಡಿ ಡಿಸಿಜನ್ ತಗೊಂಡಿದ್ದಾರೆ. ಟಿಕೇಟ್ ಕೊಡುವಾಗ ಒಂದೇ ವಿಷಯ ಇರಲ್ಲ, ಈಶ್ವರಪ್ಪ ಹಿರಿಯ ನಾಯಕರು, ಅಸಮಾಧಾನ ಆಗಿರೋದನ್ನ ಬಗೆಹರಿಸೋ ಕೆಲಸ ವರಿಷ್ಟರು ಮಾಡ್ತಾರೆ. ಈಶ್ವರಪ್ಪ ಅವರು ವಿಧಾನಸಭೆ ಚುನಾವಣೆ ವೇಳೆ ತಾವಾಗೇ ಟಿಕೆಟ್ ಬೇಡ ಅಂತ ಬಿಟ್ಟವರು, ಕಾಂತೇಶ್ ವಯಸ್ಸು ಬಹಳ ಇದೆ ಮುಂದೆ ಒಳ್ಳೆದಾಗುತ್ತೆ ಎಂದು ಹೇಳಿದರು.