ಕಲಬುರಗಿ: ಕಲಬುರಗಿಯಲ್ಲಿ ಉಂಟಾಗಿರುವ ತೀವ್ರ ಬರಗಾಲ ಹಿನ್ನಲೆ ಜನರ ಸಂಕಷ್ಟಕ್ಕೆ ದನಿಯಾಗುವ ನಿಟ್ಟಿನಲ್ಲಿ ಟ್ರಾಮಾ ಕೇರ್ ಉಚಿತ ಚಿಕಿತ್ಸೆ ನೀಡಲು ಕಲಬುರಗಿಯ ಶಾಂತಾ ಹಾಸ್ಪಿಟಲ್ ನಿರ್ಧರಿಸಿದೆ..ಈ ಉಚಿತ ಚಿಕಿತ್ಸೆ ವ್ಯವಸ್ಥೆಯನ್ನ ಖುದ್ದು ಶಾಂತಾ ಆಸ್ಪತ್ರೆಯ ಮುಖ್ಯಸ್ಥ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ.
ಆರ್ಥಿಕ ತೊಂದರೆ ಇರುವ ಯಾರೇ ನೋವು ಹೇಳಿಕೊಂಡು ಬಂದ್ರೂ ಟ್ರಾಮಾ ಕೇರ್ ಚಿಕಿತ್ಸೆ ನೀಡ್ತಿದ್ದೇವೆ.ವಿಶೇಷವಾಗಿ ಅಫಜಲಪುರ ಕ್ಷೇತ್ರದ ಜನರಿಗೆ ಎಲ್ಲ ರೀತಿಯ ಉಚಿತ ಚಿಕಿತ್ಸೆಯನ್ನ ಈಗಾಗಲೇ ಕಳೆದ 20 ದಿನಗಳಿಂದ ನೀಡುತ್ತಿರೋದು ನಮಗೆ ಹೆಮ್ಮೆಯ ಸಂಗತಿ ಅಂತ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ…